Saturday , 13 June 2026

ತರ್ಕಕ್ಕೆ ನಿಲುಕದ್ದು (ಸತ್ಯ ಕಥೆ) – ಬಾಲಕೃಷ್ಣ ಸಹಸ್ರಬುದ್ಧೆ ಮುಂಡಾಜೆ

***********************
ಈ ಜಗತ್ತು ಬಹಳ ವಿಚಿತ್ರ. ನಾವಿಂದು ವೈಜ್ಞಾನಿಕವಾಗಿ ಬಹಳ ಮುಂದುವರಿದಿದ್ದೇವೆ ಎನ್ನುವ ಭ್ರಮೆಯಲ್ಲಿದ್ದೇವೆ. ಆದರೆ ನಾವು ಕಲಿತದ್ದು ಬರಿದೆ ಒಂದು ಭಾಗವಿರಬಹುದು. ಕಲಿಯಬೇಕಾದದ್ದು ತೊಂಭತ್ತೊಭತ್ತು ಭಾಗವಿದೆ. ನಾವು ಯಾವ ದೃಷ್ಟಿಕೋನದಿಂದ ನೋಡಿದರೂ ನಮಗೆ ಒಂದಿಂಚೂ ರಹಸ್ಯವನ್ನು ಭೇದಿಸಲಾಗದ ಲಕ್ಷಾಂತರ ವಿಷಯಗಳು ಈ ಪ್ರಕೃತಿಯಲ್ಲಿ ಅನಾದಿ ಕಾಲದಿಂದಲೂ ನಡೆಯುತ್ತಲೇ ಬಂದಿದೆ. ಮುಂದೆಯೂ ನಡೆಯುತ್ತಲೇ ಇರುತ್ತವೆ. ಸಣ್ಣ ಸಣ್ಣ ವಿಷಯಗಳನ್ನು ಅರಿತುಕೊಂಡು ನಾವು ರಹಸ್ಯವನ್ನು ಭೇದಿಸಿದ್ದೇವೆ ಎಂದು ನಾವಂದುಕೊಂಡರೆ ಪ್ರಕೃತಿ ಮನಸ್ಸಿನೊಳಗೆ ನಗುತ್ತಲೇ ಇರುತ್ತದೆ ನಮ್ಮ ಮುಗ್ಧತನಕ್ಕೆ. ಏನೇ ಇರಲಿ ಇಲ್ಲಿ ನನಗಾದ ವಿಚಿತ್ರ ಅನುಭವವನ್ನು ಮಾತ್ರ ನಾನು ನಿಮ್ಮ ಮುಂದಿಡಬಲ್ಲೆ ಹೊರತು ಅದಕ್ಕೆ ತಾರ್ಕಿಕವಾಗಿ ಉತ್ತರಿಸಲಾರೆ. ನಿಮಗೇನಾದರು ಉತ್ತರ ಸಿಕ್ಕರೆ ಸಿಗಲೂಬಹುದು.

ಸಾಧಾರಣ ಐದು ವರ್ಷದಷ್ಟು ಹಿಂದೆ ಹೋಗೋಣ. ನನ್ನ ಪತ್ನಿಯಾದ ಮಹಾಲಕ್ಷ್ಮಿಯ ಅನಾರೋಗ್ಯದ ಕಾರಣ ನಮಗೆ ಅಂದು ಆಸ್ಪತ್ರೆ ಮತ್ತು ಮನೆಯ ಹೊರತಾದ ಇನ್ನೊಂದು ಪ್ರಪಂಚವಿರಲಿಲ್ಲ. ಆದ್ದರಿಂದ ಸಮಾಜದಲ್ಲಿ ಆಗುವಂಥ ಯಾವುದೇ ಸಾವು ನೋವುಗಳು, ಸಂಭ್ರಮಗಳು, ರಾಜಕೀಯ ಚಟುವಟಿಕೆಗಳು, ಮನೋರಂಜನೆಗಳು ನಮ್ಮ ಹತ್ತಿರಕ್ಕೂ ಬರುತ್ತಿರಲಿಲ್ಲ. ವಾರ್ತಾ ಪತ್ರಿಕೆ, ಟಿ.ವಿ. ಮಾಧ್ಯಮವಂತು ನೇಪಥ್ಯಕ್ಕೇ ಸೇರಿಹೋಗಿತ್ತು.
ಮಹಾಲಕ್ಷ್ಮಿಗೆ ತಲೆಯ ಶಸ್ತ್ರಚಿಕಿತ್ಸೆಯಾಗಿ ಎರಡು ತಿಂಗಳು ಆಸ್ಪತ್ರೆಯಲ್ಲಿದ್ದು ಗುಣಮುಖವಾಗುತ್ತಿದ್ದಂತೆ ವೈದ್ಯರು ಹೇಳಿದ್ದರು ಸ್ವಲ್ಪ ದಿವಸ ಮನೆಗೆ ಕರಕೊಂಡು ಹೋಗಿ ವಾತಾವರಣ ಬದಲಾದಾಗ ಬೇಗನೆ ಗುಣಮುಖಳಾಗಬಹುದು ಎಂದು. ಅಂತೆಯೇ ಅವಳನ್ನು ಮನೆಗೆ ಕರಕೊಂಡು ಬಂದೆವು. ಆದರೆ ಯಾವ ಅಂಗಾಂಗವೂ ಸ್ವಾಧೀನವಿಲ್ಲದ್ದರಿಂದ ಪ್ರತಿಯೊಂದು ಕ್ಷಣದಲ್ಲೂ ಹತ್ತಿರ ಒಬ್ಬರು ಬೇಕಾಗಿರುತ್ತಿತ್ತು. ಹಾಗೆಂದು ತಲೆಯ ಒಳಗಿನ ಬುದ್ಧಿ, ಪ್ರಜ್ಞೆ, ವ್ಯವಹಾರ ಜ್ಞಾನ ಚೆನ್ನಾಗಿಯೇ ಇತ್ತು. ಓದಲು ಬರೆಯಲು ಸಾಧ್ಯವಾಗದಿದ್ದರೂ ಯಾರಾದರು ಓದಿ ಹೇಳಿದರೆ ಒಂದೆರಡು ನಿಮಿಷ ಕೇಳುವಷ್ಟು ತಾಳ್ಮೆಯೂ ಇತ್ತು. ಆದರೆ ಬರಬರುತ್ತ ಬರಬರುತ್ತ ಇವೆಲ್ಲ ಕ್ರಿಯೆಗಳೂ ದಿವಸದಿಂದ ದಿವಸಕ್ಕೆ ಕ್ಷೀಣವಾಗುತ್ತಿದ್ದವು. ಮಾತು ಅಸ್ಪಷ್ಟವಾಗಿ ಇದ್ದರೂ ನಮಗೆ ಅರ್ಥವಾಗುವಂತಿತ್ತು. ಈ ಸ್ಥಿತಿಯಲ್ಲಿರುವಾಗ

ಒಂದು ದಿನ ಬೆಳಗ್ಗೆ ಅವಳಿಗೆ ಕಾಫಿ ಕುಡಿಸುತ್ತಿರುವಾಗ ‘ಇವತ್ತು ಬೆಳಗ್ಗಿನ ಜಾವ ಬನ್ನಂಜೆ ಗೋವಿಂದಾಚಾರ್ಯರು ತೀರಿ ಹೋದರೆಂದು ಕನಸು ಬಿತ್ತು’ ಎಂದಳು. ಕನಸುಗಳೆಂದರೆ ಅದು ಹೀಗೇ. ಅದಕ್ಕೆ ಯಾವ ವಿಶೇಷಾರ್ಥಗಳಿಲ್ಲವೆಂದು ನಾನು ಪರಿಗಣಿಸಿದ್ದರಿಂದ ನನಗಿದು ವಿಶೇಷವೆಂದು ಕಾಣಲಿಲ್ಲ. ‘ಇರಲಿ ಬಿಡು ಈಗ ಕಾಫಿ ಕುಡಿ’ ಎಂದು ಹೇಳಿ ಆ ವಿಷಯವನ್ನು ಮರೆ ಮಾಚಲು ಯತ್ನಿಸಿದೆ. ಆದರೆ ಮಹಾಲಕ್ಷ್ಮಿ ಮಹಾಲಕ್ಷ್ಮಿ ‘ಇಲ್ಲ ನನಗೆ ಈಗಲೂ ಆ ಚಿತ್ರಣ ನೆನಪಿದೆ. ಬನ್ನಂಜೆಯವರ ಹೆಣವನ್ನು ಮಲಗಿಸಿದ್ದರು. ಸುತ್ತ ಮುತ್ತ ಪಾಣಿ ಪಂಚೆಯನ್ನ ಧರಿಸಿಕೊಂಡು ಪುರೋಹಿತರು ಹಿಂದೆ ಮುಂದೆ ತಿರುಗುತ್ತಿದ್ದರು. ಬಾಯಲ್ಲೇನೋ ಮಂತ್ರ ಹೇಳುತ್ತಿದ್ದರು. ಮಾತ್ರವಲ್ಲ ಅವರ ಮನೆಯ ಹೆಸರು ಕೂಡಾ ನೆನಪಿದೆ’ ಎಂದಾಗ ‘ಏನು ಹೆಸರು ಹೇಳು’ ಎಂದೆ. ಕೂಡಲೆ ಆಕೆ ‘ಈಶಾವಾಸ್ಯ’ ಎಂದು ಹೇಳಿದರು. ಅಲ್ಲಿಗೆ ನನಗೆ ಏನೋ ಒಂದು ಸತ್ಯವಿದೆ ಎಂಬ ಅರಿವಾಗತೊಡಗಿತ್ತು. ಯಾಕೆಂದರೆ ಮಹಾಲಕ್ಷ್ಮಿ ಬನ್ನಂಜೆಯವರ ಮನೆಗೆ ಒಂದು ಬಾರಿಯೂ ಹೋಗಿರಲಿಲ್ಲ. ಆದ್ದರಿಂದ ಅವರ ಮನೆಯ ಹೆಸರು ಗೊತ್ತಿರಲು ಸಾಧ್ಯವೇ ಇಲ್ಲ. ನಾನಾದರೊ ಹಲವಾರು ಬಾರಿ ಬನ್ನಂಜೆಯವರ ಮನೆಗೆ ಹೋಗಿದ್ದರು ಅವರ ಮನೆಯ ಹೆಸರು ಜ್ಞಾಪಕದಲ್ಲಿರಲಿಲ್ಲ. ಅದಲ್ಲದೆ ನಮ್ಮ ಮನೆಗೂ ಅವರ ಮನೆಗೂ ಯಾವುದೇ ಸಂಪರ್ಕವೂ ಇರಲಿಲ್ಲ. ಅಂಥದ್ದರಲ್ಲಿ ಆಕೆ ಏಕಾಏಕಿ ಬನ್ನಂಜೆಯವರ ಸಾವಿನ ಕನಸು ಹೇಳುವಾಗ ಒಂದು ವೇಳೆ ಹೌದಾದರೂ ಅಲ್ಲಿಗೂ ಇಲ್ಲಿಗೂ ಅದ್ಯಾವ ಸಂಬಂಧವೆಂದೇ ತಿಳಿಯಲಿಲ್ಲ. ಏನೆ ಇರಲಿ ಇದು ಕನಸು ಎಂದು ಸುಮ್ಮನಾದೆ. ಅಲ್ಲಿಗೆ ಅವಳು ಕೂಡಾ ಅದನ್ನು ಗಂಭೀರವಾಗಿ ತೆಗೆದು ಕೊಳ್ಳುವಂಥ ಮನಸ್ಥಿತಿಯನ್ನು ಹೊಂದಿರಲಿಲ್ಲ.

ಆದರೂ ನನ್ನ ಮನಸ್ಸಿನೊಳಗೊಂದು ಹುಳ ಸೇರಿದ್ದು ಸುಳ್ಳಲ್ಲ. ಹಾಗೆಯೆ ಅಂಗಡಿಗೆ ಹೋದವನು ಅಂದಿನ ವಾರ್ತಾ ಪತ್ರಿಕೆಯೊಂದನ್ನು ಪಡಕೊಂಡೆ. ಓದುವಾಗ ನನಗೆ ವಿಸ್ಮಯವೇ ಆಗಿತ್ತು. ಯಾಕೆಂದರೆ ಬನ್ನಂಜೆಯವರ ಸಾವಿನ ಸುದ್ದಿಯ ಬದಲಿಗೆ ಅವರ ಮಗನ ಸಾವಿನ ಸುದ್ದಿ ಆ ಪತ್ರಿಕೆಯಲ್ಲಿತ್ತು. ಸೀದಾ ಮನೆಗೆ ಬಂದು ಮಹಾಲಕ್ಷ್ಮಿಗೆ ‘ನಿನ್ನ ಕನಸಿನಂತೆ ಬನ್ನಂಜೆಯಲ್ಲಿ ಒಂದು ಮರಣವಾಗಿದೆ. ಆದರೆ ಅದು ಬನ್ನಂಜೆಯವರ ಮಗನದ್ದು’ ಎಂದು ಸುದ್ದಿಯನ್ನು ಓದಿ ಹೇಳಿದೆ. ಅದಕ್ಕವಳು ಶುಷ್ಕ ಭಾವದಿಂದ ‘ಅದಲ್ಲ ಗೋವಿಂದಾಚಾರ್ಯರೇ ತೀರಿದ ಕನಸು ಬಿತ್ತು’ ಎಂದು ಸುಮ್ಮನಾದಳು. ಆದರೆ ನಿಜವಾಗಿ ಗೊಂದಲ ಉಂಟಾದದ್ದು ಮಾತ್ರ ನನಗೆ. ಇರಲಿ ಇದಕ್ಕೆ ತಲೆ ಕೆಡಿಸಿಕೊಳ್ಳುವ ಸ್ಥಿತಿಯಲ್ಲಿ ನಾನಿಲ್ಲವೆಂಬ ಭಾವದಿಂದ ಅದನ್ನು ಅಲ್ಲಿಗೇ ಬಿಟ್ಟುಬಿಟ್ಟೆ. ಈ ಘಟನೆಯಾಗಿ ಕೆಲವೇ ದಿನಗಳಲ್ಲಿ ಬನ್ನಂಜೆ ಗೋವಿಂದಾಚಾರ್ಯರು ಎರಡು ಸಾವಿರದ ಇಪ್ಪತ್ತನೇ ದಶಂಬರ್ ಹದಿಮೂರನೇ ತಾರೀಕಿನಂದು ತೀರಿದರೆಂಬ ಅಸಲಿ ಸುದ್ದಿ ಬಂದಾಗ ಅಂತು ನಾವು ಮನೆಯವರೆಲ್ಲರೂ ಆಶ್ಚರ್ಯಚಕಿತರಾದದ್ದಂತು ಸತ್ಯವೆ.

ನನಗೆ ಈ ಘಟನೆ ಇಂದಿಗೂ ಉತ್ತರ ಸಿಗದ ಪ್ರಶ್ನೆಯಾಗಿಯೇ ಉಳಿದಿದೆ. ನಾನೊಬ್ಬನೇ ಇದ್ದಿದ್ದರೆ ಇದೊಂದು ಭ್ರಮೆ ಎನ್ನಬಹದಿತ್ತೋ ಏನೊ. ಆದರೆ ನನ್ನ ಜತೆ ಮಕ್ಕಳಾದ ನವಮಿ ಮತ್ತು ಶಾರ್ವರಿಯೂ ಇವಳು ಹೇಳುತ್ತಿದ್ದ ಕನಸನ್ನು ಕೇಳಿದ್ದರಿಂದ ಭ್ರಮೆಯಾಗಲು ಸಾಧ್ಯವೇ ಇಲ್ಲ. ಹಾಗೆಂದು ಮಹಾಲಕ್ಷ್ಮಿ ಜ್ಯೋತಿಷ್ಯ ಅಥವಾ ಭವಿಷ್ಯವನ್ನು ತಿಳಿದಿರಲಿಲ್ಲ. ಅಚಾನಕ್ಕಾಗಿ ಆಕೆಗೆ ಬಿದ್ದ ಕನಸಿನ ಹಿಂದೆ ಅದ್ಯಾವ ಲೆಕ್ಕಾಚಾರವಿತ್ತೋ ಆ ದೇವರೇ ಬಲ್ಲ. ಹಾಗಾದರೆ ಇದು ತರ್ಕಕ್ಕೆ ನಿಲುಕದ್ದು ಎಂದೇ ಹೇಳಬೇಕಾಗುತ್ತದೆ. ನೀವೇನಂತೀರಿ..?
***************************
ಬಾಲಕೃಷ್ಣ ಸಹಸ್ರಬುದ್ಧೆ ಮುಂಡಾಜೆ

Events/Announcements

Advertisement

ಹೊಸಮಠದ ಚಿತ್ಪಾವನರಿಂದ ದೇಗುಲ ದರ್ಶನ, ಗೋಶಾಲೆ, ಸೇವಾಶ್ರಮ ಮತ್ತು ಅಳಿಕೆ ಸತ್ಯಸಾಯಿ ವಿದ್ಯಾಸಂಸ್ಥೆಗೆ ಒಂದು ದಿನದ ಭೇಟಿ (31 ಮೇ, ಭಾನುವಾರ)

Post Views: 29 ಹೊಸಮಠದ ಚಿತ್ಪಾವನರಿಂದ ದೇಗುಲ ದರ್ಶನ, ಗೋಶಾಲೆ, ಸೇವಾಶ್ರಮ ಮತ್ತು ಅಳಿಕೆ ಸತ್ಯಸಾಯಿ ವಿದ್ಯಾಸಂಸ್ಥೆಗೆ ಒಂದು ದಿನದ ಭೇಟಿ (31 ಮೇ, ಭಾನುವಾರ) ವಿಟ್ಲ ಪಂಚಲಿಂಗೇಶ್ವರ ದೇವಸ್ಥಾನ, ಪದ್ಯಾಣ...

ಡಾ. ಚಂದ್ರಶೇಖರ ದಾಮ್ಲೆಯವರಿಗೆ ‘ಯಕ್ಷಗಾನ ಕಲಾರಂಗ ಪ್ರಶಸ್ತಿ

Post Views: 55   ಉಡುಪಿಯ ಯಕ್ಷಗಾನ ಕಲಾರಂಗ, ತಲ್ಲೂರು ಕನಕಾ-ಅಣ್ಣಯ್ಯ ಶೆಟ್ಟಿ ನೆನಪಿನಲ್ಲಿ ವಿದ್ವಾಂಸರಿಗೆ ನೀಡುವ ‘ಯಕ್ಷಗಾನ ಕಲಾರಂಗ ಪ್ರಶಸ್ತಿ’ಗೆ ನಿವೃತ್ತ ಪ್ರಾಧ್ಯಾಪಕ, ಶಿಕ್ಷಣ ತಜ್ಞ, ಲೇಖಕ,ಪ್ರಸಂಗ ಕರ್ತ, ಕಲಾವಿಮರ್ಶಕ,...

ಬೆಳ್ತಂಗಡಿ ತಾಲೂಕು ಚಿತ್ಪಾವನ ಬ್ರಾಹ್ಮಣರ ಸಂಘ -ಮಹಿಳಾ ಘಟಕದ ಪ್ರಥಮ ಸಭೆ ಮತ್ತು ಹೊಸಮಠ ವಠಾರದ ಕುಟುಂಬ ಸಮ್ಮಿಲನ ಕಾರ್ಯಕ್ರಮ

Post Views: 44 ****** -***** ಬೆಳ್ತಂಗಡಿ ತಾಲೂಕು ಚಿತ್ಪಾವನ ಬ್ರಾಹ್ಮಣರ ಸಂಘದ ಮಹಿಳಾ ಘಟಕದ ಪ್ರಥಮ ಸಭೆ ಮತ್ತು ಹೊಸಮಠ ವಠಾರದ ಕುಟುಂಬ ಸಮ್ಮಿಲನ ಕಾರ್ಯಕ್ರಮ ಶ್ರೀ ಅಜಿತ ಹೆಬ್ಬಾರ್...

ಮಾಳ ಶ್ರೀ ಪರಶುರಾಮ ದೇವಸ್ಥಾನದಲ್ಲಿ ವಸಂತ ವೇದ ಪಾಠ ಮತ್ತು ಸಂಸ್ಕಾರ ಶಿಬಿರ

Post Views: 72 ಮಾಳ ಶ್ರೀ ಪರಶುರಾಮ ದೇವಸ್ಥಾನದಲ್ಲಿ ವಸಂತ ವೇದ ಪಾಠ ಮತ್ತು ಸಂಸ್ಕಾರ ಶಿಬಿರ ಕಾರ್ಕಳ ತಾಲೂಕು ಎಡಪಾಡಿ ಶ್ರೀ ಕಾಲಕಾಮ ಪರಶುರಾಮ ದೇವಸ್ಥಾನದಲ್ಲಿ ಹತ್ತು ದಿನಗಳ ವಸಂತ...

ಡಿ. ಹರೀಶ್ ತಾಮನ್ಕರ್ ರವರ ಶಿಕ್ಷಣ ಕ್ರಾಂತಿ

Post Views: 46 ಡಿ. ಹರೀಶ್ ತಾಮನ್ಕರ್ ಅವರು ಕೊಡಗು ಜಿಲ್ಲೆಯ ಗೋಣಿಕೊಪ್ಪ ಎಂಬಲ್ಲಿ ಕಳೆದ 19 ವರ್ಷಗಳಿಂದ ಶಿಕ್ಷಣ ಕ್ರಾಂತಿ ಪ್ರಾರಂಭಿಸಿದ್ದಾರೆ. ಅವರು ವಿದ್ಯಾನಿಕೇತನ ಪಿಯು ಕಾಲೇಜನ್ನು 2007 ರಲ್ಲಿ...

ಪರಶುರಾಮ ಜಯಂತಿ – ಚಿತ್ಪಾವನ ಬ್ರಾಹ್ಮಣ ಸಂಘ, ಮೖಸೂರು

Post Views: 82 ದಿನಾಂಕ 19/04/2026, ಭಾನುವಾರದಂದು ಚಿತ್ಪಾವನ ಬ್ರಾಹ್ಮಣ ಸಂಘ, ಮೖಸೂರು ವತಿಯಿಂದ ಮೖಸೂರಿನ ಬಿ. ಎಸ್. ಎಸ್. ವಿದ್ಯೋದಯ ಶಿಕ್ಷಣ ಸಂಸ್ಥೆ ಆವರಣದಲ್ಲಿ ಸಂಜೆ 5-30 ರಿಂದ 8...

ಸಚಿನ್ ಭಿಡೆಯವರ ನಿರಂತರ ಸಮಾಜ ಸೇವೆಯನ್ನು ಗುರುತಿಸಿ ಗೌರವಿಸಲಾಯಿತು

Post Views: 83 ಮುಂಡಾಜೆ ವನದುರ್ಗ ದೇವಸ್ಥಾನದಲ್ಲಿ ಆಪದ್ಭಾಂಧವ ಸಚಿನ್ ಭಿಡೆಯವರ ನಿರಂತರ ಸಮಾಜ ಸೇವೆಯನ್ನು ಗುರುತಿಸಿ ಗೌರವಿಸಲಾಯಿತು. ಅಭಿನಂದನೆಗಳು🌹

ಸಂತೃಪ್ತಿ ಫಡಕೆ – ಆಧಾರ್ ಸರ್ವಿಸ್ ನ ಅತ್ಯುತ್ತಮ ಸೇವೆಗೆ ವಿಭಾಗೀಯ ಪ್ರಶಸ್ತಿ

Post Views: 72 ಸಂತೃಪ್ತಿ ಫಡಕೆ ಪೋಸ್ಟ್ ಮಾಸ್ಟರ್ ಕೊಯ್ಯುರು ಬೆಳ್ತಂಗಡಿ ಅವರಿಗೆ ಆಧಾರ್ ಸರ್ವಿಸ್ ನ ಅತ್ಯುತ್ತಮ ಸೇವೆಗೆ ವಿಭಾಗೀಯ ಪ್ರಶಸ್ತಿ. ಅಭಿನಂದನೆಗಳು

ಶ್ರೀ ಮುಂಡಾಜೆ ಅನಂತ ತಾಮನ್ಕರ್ ಮೈಸೂರು – ಪುಸ್ತಕ ಬಿಡುಗಡೆ ಸಮಾರಂಭ

Post Views: 94 ಮೈಸೂರಿನಲ್ಲಿ ಶ್ರೀ ಮುಂಡಾಜೆ ಅನಂತ ತಾಮನ್ಕರ್ ಅವರ ಎರಡು ಪುಸ್ತಕ ಬಿಡುಗಡೆ ಸಮಾರಂಭ ನಡೆಯಿತು

ಸ್ವಾಗತ – ಖ್ಯಾತ ವೈದ್ಯ,ವಿಜ್ಞಾನಿ ಪ್ರದೀಪ್ ಭಿಡೆ

Post Views: 156 ಮುಂಡಾಜೆ ಭಿಡೆ ಮನೆಯ, ಪ್ರಸ್ತುತ ಅಮೆರಿಕದ ಫ್ಲೋರಿಡಾ ಯೂನಿವರ್ಸಿಟಿಯಲ್ಲಿ “ಮಕ್ಕಳಲ್ಲಿ ಗುರುತಿಸಲಾಗದ ಖಾಯಿಲೆಗಳ” ವಿಭಾಗದ ಮುಖ್ಯಸ್ಥರಾಗಿರುವ ಖ್ಯಾತ ವೈದ್ಯ,ವಿಜ್ಞಾನಿ ಪ್ರದೀಪ್ ಭಿಡೆಯವರು ಹುಟ್ಟೂರಿಗೆ ಆಗಮಿಸಿದ ಸಂದರ್ಭ ಮುಂಡಾಜೆಯ...

Recently Added

View All

ಪನೀರ್ ಸತ್ಯ: ನಿಜ ಮತ್ತು ನಕಲಿ ಪನೀರ್ ನಡುವಿನ ವ್ಯತ್ಯಾಸ – ಡಾ ರವಿಕಿರಣ ಪಟವರ್ಧನ

Post Views: 102 🥛 ಪನೀರ್ ಸತ್ಯ: ನಿಜ ಮತ್ತು ನಕಲಿ ಪನೀರ್ ನಡುವಿನ ವ್ಯತ್ಯಾಸ ಡಾ ರವಿಕಿರಣ ಪಟವರ್ಧನ. ಪಟವರ್ಧನ ಆಯುರ್ವೇದ ಕ್ಲಿನಿಕ್.ಶಿರಸಿ.581401. 9242122874. ಪನೀರ್ — ಭಾರತೀಯ ಅಡುಗೆಮನೆಯ...

ವಾಸುದೇವ ಬಲವಂತ ಫಡ್ಕೆ

Post Views: 185 ವಾಸುದೇವ ಬಲವಂತ ಫಡ್ಕೆ ೪ ನವೆಂಬರ್ ೧೮೪೫ – ೧೭ ಫೆಬ್ರವರಿ ೧೮೮೩ ಒಬ್ಬ ಸ್ವಾತಂತ್ರ್ಯ ಹೋರಾಟಗಾರರು ಫಡ್ಕೆ ಒಂದು ಮರಾಠಿ ಚಿತ್ಪಾವನ ಬ್ರಾಹ್ಮಣ ಕುಟುಂಬದಲ್ಲಿ ಮಹಾರಾಷ್ಟ್ರ...

Sliding Doors with Mosquito Net – Contact Vaishali Marathe – 9900820187

Post Views: 263 Along with the existing doors, these mesh doors can be fixed. Easy to use. For actual usage refer below video...

Terms & Conditions – For Classified

Post Views: 200 ಸುದ್ದಿ ಸುವಿಧಾ ಕೇವಲ ವರ್ಗೀಕೃತ ಜಾಹೀರಾತುಗಳನ್ನು ಪ್ರಕಟಿಸುವ ವೇದಿಕೆಯಷ್ಟೇ ಆಗಿದ್ದು, ಜಾಹೀರಾತಿನಲ್ಲಿ ನೀಡಲಾದ ಯಾವುದೇ ಉತ್ಪನ್ನ ಅಥವಾ ಸೇವೆಯ ಗುಣಮಟ್ಟ, ಸ್ಥಿತಿ, ಬೆಲೆ ಅಥವಾ ನೈಜತೆಯ ಬಗ್ಗೆ...

Nikon Z7 – 5 year old – Body only – for sale – Contact : 9591522880

Post Views: 272 Nikon Z7 5 year old Body only for sale Shutter : 165000 approximately Well maintained always kept in dry cabinet...

ನರ್ಮದಾ ಪರಿಕ್ರಮ – ಅಶೋಕ್ ಪಟ್ವರ್ಧನ್ – ಒಂದು ಆಧ್ಯಾತ್ಮಿಕ ಅನುಭವ

Post Views: 336 ನರ್ಮದಾ ಪರಿಕ್ರಮ — ಅಶೋಕ್ ಪಟ್ವರ್ಧನ್ ಮತ್ತು ಸಹಚರರು ಇತ್ತೀಚೆಗೆ ಕೈಗೊಂಡ ಪವಿತ್ರ ನರ್ಮದಾ ಪರಿಕ್ರಮದ ಅನುಭವ. — ಇದು ಕೇವಲ ಯಾತ್ರೆಯಲ್ಲ, ಆಧ್ಯಾತ್ಮಿಕ ಅನುಭವ. –ನರ್ಮದಾ...

ಕಡ್ಲೆ vs ಬಿಳಿ ಕಡ್ಲೆ ⚪: ಪೌಷ್ಟಿಕಾಂಶ ಮತ್ತು ಆರೋಗ್ಯ ಲಾಭಗಳು – ಡಾ ರವಿಕಿರಣ ಪಟವರ್ಧನ.

Post Views: 211 ದೀಪೋತ್ಸವದ ಉಸುಳಿ ವಿಜ್ಞಾನ 🪔 ಕಾರ್ತಿಕ–ಮಾರ್ಗಶಿರ ಮಾಸ… ದೀಪದ ಬೆಳಕಿನ ಕಂಪನ… ದೇವಸ್ಥಾನಗಳ ಗಂಟೆಯ ನಿನಾದ… ಮಂಟಪ–ಗೋಪುರಗಳ ನಡುವೆ ಹರಡುವ ಪ್ರಸಾದದ ಪರಿಮಳ…ಕೆಲವು ದೇವಸ್ಥಾನಗಳು ಪ್ರಸಾದ ರುಚಿಗಾಗಿಯೇ...

ವೈದ್ಯಕೀಯ ಸಲಕರಣೆ ಮಾಹಿತಿ ಕೇಂದ್ರ

Post Views: 191 ವೈದ್ಯಕೀಯ ಸಲಕರಣೆ ಮಾಹಿತಿ ಕೇಂದ್ರ. ಗಣಪತಿ ನೀಲಕಂಠ ಪಟವರ್ಧನ್ ಪ್ರತಿಷ್ಠಾನ, ಶಿರಸಿ C/O ಡಾ. ರವಿಕಿರಣ ಪಟವರ್ಧನ ಆಯುರ್ವೇದ ವೈದ್ಯ, ಹೋಸಪೇಟೆ ರಸ್ತೆ, ಶಿರಸಿ 581401.  ...

ಚಳಿಗಾಲದ ಆರೋಗ್ಯ ಮಾರ್ಗದರ್ಶಿ-ಡಾ. ರವಿಕಿರಣ ಪಟವರ್ಧನ

Post Views: 230 ಆಯುರ್ವೇದ ವೈದ್ಯ ಡಾ. ಪಟವರ್ಧನರ ಮನೆ, ಹೊಸಪೇಟೆ ರಸ್ತೆ ಶಿರಸಿ – 581401 ಸಾಮಾನ್ಯವಾಗಿ ನವೆಂಬರ್ ತಿಂಗಳಿನಿಂದ ಫೆಬ್ರವರಿ ಅಂತ್ಯದವರೆಗೂ ಚಳಿಗಾಲವಿರುತ್ತದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಅಲ್ನಿನೊ...

Informative youtube video about Chitpavan Brahmins

Post Views: 144 Courtesy: Scholarspace with Anubhav

Watch our latest podcasts