Saturday , 25 July 2026

ಚಿತ್ಪಾವನರ ವಲಸೆ (Migration of the Chitpavans)

ಚಿತ್ಪಾವನರು ಎಂದಾಕ್ಷಣ ಮೊದಲಿಗೆ ನೆನಪಿಗೆ ಬರುವುದು ಎಂದರೆ ಇವರ ವಲಸೆ, ಕರ್ನಾಟಕದ ಹತ್ತು ಹಲವು ಸ್ಥಳಗಳಲ್ಲಿ ಅಥವಾ ಒಂದೇ ಮಾತಿನಲ್ಲಿ ಹೇಳಬೇಕೆಂದರೆ ಕರ್ನಾಟಕದಲ್ಲಿಡೀ ಹರಡಿಕೊಂಡಿರುವ ಚಿತ್ಪಾವನ ಸಂಘಟನೆಯ ವಲಸೆ ಒಂದು ಮಹತ್ತರವಾಗಿರುವಂತಹ ಮೈಲಿಗಲ್ಲು.

ಚಿತ್ಪಾವನರು ಮುಖ್ಯವಾಗಿ ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ವಲಸೆ ಬಂದಿರುವಂತಹ ಒಂದು ಸಂಘಟನೆ. ಇದಕ್ಕೆ ತಾಳಗುಂದದ ಶಾಸನದಲ್ಲೂ ಪುರಾವೆಗಳಿವೆ . ಮಹಾರಾಷ್ಟ್ರದ ಗುಹಾಗರ್, ಚಿಪ್ಳೂಣ್, ರತ್ನಾಗಿರಿ ಇಂತಹ ಪ್ರದೇಶಗಳಲ್ಲಿ ಚಿತ್ಪಾವನರು ನೆಲೆಸಿದ್ದರು.

ಖ್ಯಾತ ಸಂಶೋಧಕರಾದಂತಹ ನಾ. ಗೋ. ಚಾಫೇಕರರು ಚಿತ್ಪಾವನರ ಪ್ರಾಚೀನ ಹೆಸರು ಆರ್ಯಾವರ್ತಃ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಚಿತ್ಪಾವನರ ಈ ವಲಸೆಗೆ ಸುಮಾರು 500 ಕ್ಕಿಂತಲೂ ಹೆಚ್ಚಿನ ವರ್ಷಗಳ ಇತಿಹಾಸವಿದೆ.

ಕರ್ನಾಟಕಕ್ಕೆ ಮಹಾರಾಷ್ಟ್ರದಿಂದಾದ ಚಿತ್ಪಾವನರ ವಲಸೆಗೆ ಪ್ರಮುಖ ಕಾರಣಗಳು :

  • ಮತೀಯ ಆಕ್ರಮಣಗಳು
  • ಉದ್ಯೋಗಾನ್ವೇಷಣೆ
  • ಮರಾಠಾ ದೊರೆಗಳ ಸಂಸ್ಥಾನಿಕರಂತೆ ಬಂದವರು
  • ಜೀವನ ನಿರ್ವಹಣೆಗಾಗಿ
  • ಪರಾಕ್ರಮದಿಂದ ಸಂಸ್ಥಾನಿಕರಾಗಿ ರಾಜ್ಯಭಾರ ಮಾಡಿದವರು

ಹೀಗೆ ಚಿತ್ಪಾವನರು ಮಹಾರಾಷ್ಟ್ರದಿಂದ ಕರ್ನಾಟಕದ ಕರಾವಳಿ, ಮಲೆನಾಡು ಹಾಗೆಯೇ ಬಯಲುಸೀಮೆಯ ಪ್ರದೇಶಗಳಲ್ಲಿ ವಲಸೆ ಬಂದು ಬೀಡುಬಿಟ್ಟರು.

ತದನಂತರದಲ್ಲಿ ಕರ್ನಾಟಕದಲ್ಲೂ ಹಲವು ಆಂತರಿಕ ವಲಸೆಗಳಾದವು. ಅವುಗಳಿಗೆ ಕಾರಣಗಳು ಹೀಗಿವೆ:

  • ವೃತ್ತಿ, ಉದ್ಯಮ , ವ್ಯಾಪಾರ
  • ವೈವಾಹಿಕ ಸಂಬಂಧಗಳು
  • ಅಡುಗೆ, ಪೌರೋಹಿತ್ಯ ಮುಂತಾಗಿ ವೃತ್ತಿಪರತೆಯಿಂದ ಸಿಗುವ ಅವಕಾಶಗಳು
  • ಐಟಿ, ಬಿಟಿ, ಔದ್ಯೋಗಿಕ ಕ್ರಾಂತಿ
  • ವಯಸ್ಸಾದವರ ವಲಸೆ

ದಕ್ಷಿಣ ಕನ್ನಡದ ಪ್ರಾಂತಗಳಿಗೆ ಅಥವಾ ಕರಾವಳಿ ಪ್ರದೇಶಕ್ಕೆ ವಲಸೆ ಬಂದವರಲ್ಲಿ ಸಿಂಹಪಾಲು ಎಂದರೆ ಉತ್ತರಕೊಂಕಣದಿಂದ ಬಂದವರದ್ದು. ಉತ್ತರ ಕೊಂಕಣ ಎಂದರೆ ಗೋವಾ ಹಾಗೂ ಮಹಾರಾಷ್ಟ್ರದ ಕಡಲ ತೀರ. ಅಲ್ಲಿಂದ ವಲಸೆ ಬಂದವರಲ್ಲಿ ಚಿತ್ಪಾವನರು ಹಲವರು.

ಒಂದು ಊಹೆಯ ಪ್ರಕಾರ ಚಿತ್ಪಾವನ ಜನಾಂಗವು ಪರ್ಷಿಯಾ ಇಲ್ಲವೇ ಬರ್ಬರದಿಂದ ಗುಜರಾತಿನ ಆಸುಪಾಸಿನ ಕರಾವಳಿಗೆ ಬಂದು ನೆಲೆಗೊಂಡಿತು. ಇವರಲ್ಲಿದ್ದ ಒಳ ಪಂಗಡಗಳು ನಾಗರ, ತುರ್ಕಿ, ಉದೀಚ್ಯ ಬ್ರಾಹ್ಮಣರು. ಅಲ್ಲಿಂದ ಒಂದು ಸಮೂಹ ಸಮುದ್ರದಾರಿಯಾಗಿ ಕೊಂಕಣದ ಅಥವಾ ಮಹಾರಾಷ್ಟ್ರದ ಗುಹಾಗರ, ಚಿಪಳೂಣಗಳಿಗೆ ಬಂದು ನೆಲೆನಿಂತು ಚಿಪ್ಳೂಣೆ ಚಿತ್ಪಾವನರು ಎಂದೆನಿಸಿ ಆರ್ಯಾವರ್ತರಾದರು.

ಮಹಾರಾಷ್ಟ್ರದ ಪ್ರಾಕೃತ ಭಾಷೆಯೊಂದನ್ನು ಅಂಗೀಕರಿಸಿಕೊಂಡು ಚಿತ್ಪಾವನರಿಗೆ ಚಿತ್ಪಾವನಿ ಭಾಷೆಯೊಂದು ರೂಪುಗೊಂಡಿತು.

ಸುಮಾರು 14ನೇ ಶತಮಾನದ ಹೊತ್ತಿಗೆ ಈ ಚಿತ್ಪಾವನ ಜನಾಂಗವು ಉತ್ತರ ಕೊಂಕಣದಿಂದ ದಕ್ಷಿಣಕನ್ನಡಕ್ಕೆ ಯಾವಾಗ ಮತ್ತು ಯಾವ ಕಾರಣಕ್ಕಾಗಿ ಬಂದಿರಬಹುದು ಎಂಬುದಕ್ಕೆ ಉತ್ತರ ಹೀಗಿರಬಹುದು. ಪೋರ್ಚುಗೀಸರು ನಡೆಸಿದ ಮತಾಂತರ, ಮುಸ್ಲಿಂ ದೊರೆಗಳ ಕಿರುಕುಳ, ಪ್ರಾಕೃತಿಕ ವಿಕೋಪ ಇತ್ಯಾದಿ.

ದಕ್ಷಿಣ ಕನ್ನಡದಲ್ಲಿ ಚಿತ್ಪಾವನರು ಮುಖ್ಯವಾಗಿ ಬೆಳ್ತಂಗಡಿ ತಾಲೂಕಿನ ಮುಂಡಾಜೆ, ಶಿಶಿಲ, ಹತ್ಯಡ್ಕ, ಶಿಬಾಜೆ, ಸೂಳಬೆಟ್ಟು, ಬಂಗಾಡಿ, ನಿಡ್ಲೆ, ಫಂಡಿಜೆ, ಅಳಂಬ, ಕುದ್ಯಾಡಿ ಗ್ರಾಮಗಳಲ್ಲಿ, ಪುತ್ತೂರು ತಾಲೂಕಿನ ಕಡಬದಲ್ಲಿರುವ ಹೊಸಮಠ ಎಂಬಲ್ಲಿ ನೆಲೆಸಿದ್ದಾರೆ.

ಅದೇ ರೀತಿ ದಕ್ಷಿಣ ಕನ್ನಡದಿಂದ ವಿಭಜಿತಗೊಂಡ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಮಾಳ, ಕೆರ್ವಾಶೆ, ದುರ್ಗ, ತೆಳ್ಳಾರು, ಈದು, ಹೆಬ್ರಿ, ಗಂಗೆನೀರು ಗ್ರಾಮಗಳಲ್ಲಿ, ಹಾಗೂ ಕುಂದಾಪುರ ತಾಲೂಕಿನ ಹಾಲಾಡಿಯಲ್ಲಿ ನೆಲೆಸಿರುತ್ತಾರೆ.

ಹೀಗೆ ಚಿತ್ಪಾವನರು ನೆಲೆನಿಂತ ಪ್ರದೇಶಗಳನ್ನು ವಾಳ್ಯ ಅಥವಾ ವಠಾರಗಳೆಂದು ಕರೆದಿದ್ದಾರೆ.

ಕೆಲವು ವಾದಗಳ ಪ್ರಕಾರ ಚಿತ್ಪಾವನರು ಇಂಡೋ ಇರಾನಿಯನ್ ಮೂಲಕ್ಕೆ ಸೇರಿದವರೆಂದೂ ಪ್ಯಾಲೆಸ್ತಿನ್, ಈಜಿಪ್ಟ್, ಅಫ್ಘಾನ್ ಮೂಲದವರೆಂದೂ ಮಂಡಿಸಲಾಗುತ್ತದೆ. ಇವರ ಗೋಧಿ ಮೈಬಣ್ಣ , ಕೆಂಚಾದ ಕೂದಲ ಬಣ್ಣ , ಬೂದು ಬಣ್ಣ ಮಿಶ್ರಿತ ಕಣ್ಣುಗಳು ಇಂತಹ ದೈಹಿಕ ಲಕ್ಷಣಗಳನ್ನು ಅನುಸರಿಸಿಕೊಂಡು ಇತ್ತೀಚಿಗೆ ನಡೆಸಿದಂತಹ DNA ಪರೀಕ್ಷೆಗಳ ಫಲಿತಾಂಶವೂ ಈ ವಾದಕ್ಕೆ ಒಂದು ದಾರಿಯನ್ನು ತೋರಿಸುತ್ತಿವೆ.

ನಮ್ಮ ಚಿತ್ಪಾವನರ ಇನ್ನೊಂದು ವಿಶೇಷತೆಯೆಂದರೆ ಅವರ ಕುಲನಾಮಗಳು. ಒಂದೊಂದು ಕುಲಗಳಿಗೆ ಒಂದೊಂದು ಕುಲನಾಮಗಳಿರುತ್ತವೆ. ಅಂತಹ ಕುಲನಾಮಗಳು ನಮ್ಮ ಚಿತ್ಪಾವನರಲ್ಲಿ 100ಕ್ಕೂ ಹೆಚ್ಚಿವೆ.

ಕೆಲವರ ಪ್ರಕಾರ ಅವರು ವಾಸವಗಿದ್ದ ಊರುಗಳ , ವಾಳ್ಯಗಳ ಮೂಲಕ ಈ ಕುಲನಾಮಗಳು ಬಂದಿವೆ.

ಉದಾಹರಣೆಗೆ, ಗಣಫುಲೆ, ಚಿತಳೆ, ನಾತು, ಚಿಪಳೂಣಕರ್, ಮೆಹೆಂದಳೆ, ಪಟವರ್ಧನ್, ಗೋರೆ, ಸಾಠೆ ಹೀಗೆ.

ಮಾಹಿತಿ: ಕರ್ನಾಟಕ ಚಿತ್ಪಾವನ ವೃತ್ತಾಂತ ಪುಸ್ತಕ

 

Migration of the Chitpavans

When it comes to Chitpavans, the first thing that comes to mind is their migration, which is a major milestone in many places in Karnataka, or in other words, the migration of the Chitpavan organization spread across Karnataka.

Chitpavanas are mainly a community that has come from Maharashtra to Karnataka. There is evidence of this in the Talagunda inscription as well.The Chitpavans lived in areas such as Guhagar, Chiplun, Ratnagiri in Maharashtra

Renowned researcher Na. Go. Chaphekar has opined that the ancient name of Chitpavana is Aryavarta.

This migration of the Chitpavans has a history of more than 500 years.

The main reasons for the migration of Chitpavans from Maharashtra to Karnataka are:


  • Religious attacks
  • Job search
  • Those who came as courtiers of the Maratha kings
  • For life support

Thus, Chitpavan migrated from Maharashtra and settled in  Coastal, mountainous, and plains of Karnataka.

Later, many internal migrations took place in Karnataka as well. The reasons for them are as follows:

  • Profession, industry, business
  • Marital relations
  • Opportunities for professional careers in cooking and the priesthood
  • IT, BT, Industrial Revolution
  • Migration of the elderly

The lion’s share of those who migrated to the provinces or coastal areas of Dakshina Kannada are from North Konkan. North Konkan refers to the coastal areas of Goa and Maharashtra. Many of the migrants from there are Chitpavans.

According to one hypothesis, the Chitpavana race came from Persia or Berbera to the coast around Gujarat and settled. The sub-tribes among them were Nagas, Turks, and Udicya Brahmins. From there, a group sailed to the Guhagars and Chipaluns of Konkan or Maharashtra and settled there. The Chipluns believed that they were Chitpavanas and became Aryavartas.

A Chitpavani language was formed for the Chitpavans by adopting a Prakrit language from Maharashtra.

The answer to when and why this Chitpavana tribe may have come from North Konkan to South Kannada around the 14th century may be as follows: conversion by the Portuguese, persecution by Muslim rulers, natural disasters, etc.

Chitpavanas are mainly found in Dakshina Kannada.Mundaje, Shishila, Hatyadka, Shibaje, Sulabettu, Bangadi, Nidle, Fandije, Alamba, Kudyadi in Belthangady taluk,Hosa matha in Kadaba, Puttur taluk etc.

Similarly, they are also settled in Mala, Kerwashe, Durga, Thellar, Eedu, Hebri, Gangenir in Karkala taluk of Udupi district, Haladi, Kundapur taluk

Thus, the areas where the Chitpavans settled are called Valya or Vatharas.

Some argue that the Chitpavans are of Indo-Iranian origin, or of Palestinian, Egyptian, or Afghan origin. Their wheatish complexion, reddish hair, and gray eyes, along with recent DNA testing, are also pointing the way to this argument.

Another special feature of our Chitpavans is their clan names. Each clan has its own clan name. There are more than 100 such clan names in our Chitpavans.

According to some, these clan names came from the towns and villages where they lived.

For example, Ganaphule, Chitale, Natu, Chiplunkar, Mehendale, Patavardhan, Gore, Sathe, and so on.

 

Information: Karnataka Chitpavana Vruttanta Book

 

Events/Announcements

Advertisement

ವೇದಮೂರ್ತಿ ವಿಷ್ಣು ಡೋಂಗ್ರೆಯವರ ಸಂಸ್ಕೃತ ಗ್ರಂಥಕ್ಕೆ ಪುರಸ್ಕಾರ

Post Views: 8 ವೇದಮೂರ್ತಿ ವಿಷ್ಣು ಡೋಂಗ್ರೆಯವರ ಸಂಸ್ಕೃತ ಗ್ರಂಥಕ್ಕೆ ಪುರಸ್ಕಾರ ಬೆಳ್ತಂಗಡಿ: ಬೆಂಗಳೂರಿನ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಸಂಸ್ಕೃತ ಗ್ರಂಥ ಪುರಸ್ಕಾರಕ್ಕೆ ಮುಂಡಾಜೆಯ ವೇದಮೂರ್ತಿ ವಿಷ್ಣು ಡೋಂಗ್ರೆಯವರ “ವಿಷ್ಣು ಸಹಸ್ರನಾಮ...

ಬಿ.ಟಿ. ರಂಜನ್ ಪ್ರಶಸ್ತಿಗೆ ಪತ್ರಕರ್ತ ಅರವಿಂದ ಹೆಬ್ಬಾರ್ ಆಯ್ಕೆ

Post Views: 20 ಬಿ.ಟಿ. ರಂಜನ್ ಪ್ರಶಸ್ತಿಗೆ ಪತ್ರಕರ್ತ ಅರವಿಂದ ಹೆಬ್ಬಾರ್ ಆಯ್ಕೆ ಪುತ್ತೂರು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಕೊಡ ಮಾಡುವ ಬಿ.ಟಿ.ರಂಜನ್ ವಾರ್ಷಿಕ ಪ್ರಶಸ್ತಿಗೆ ವಿಜಯ ಕರ್ನಾಟಕ ಪತ್ರಿಕೆಯ...

ರಾಷ್ಟ್ರೀಯ ವೈದ್ಯ ರ ದಿನಾಚರಣೆ – ಚಿತ್ಪಾವನ ಸಮಾಜ, ಮಂಗಳೂರು

Post Views: 496 ಆತ್ಮೀಯರೇ, ರಾಷ್ಟ್ರೀಯ ವೈದ್ಯ ರ ದಿನಾಚರಣೆಯ ಪ್ರಯುಕ್ತ ನಮ್ಮ ಸಂಘವು ಆಯೋಜನೆ ಮಾಡಿದ ನಿನ್ನೆಯ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಯಿತು. ಅಧ್ಯಕ್ಷ ರಾದ ಹೇಮಂತ ಭಿಡೆ ಯವರ ಮಾರ್ಗದರ್ಶನ,...

ಗರುಡ ಗರ್ವಭಂಗ – ಚಿತ್ಪಾವನರೆ ಸೇರಿ ಪ್ರಸ್ತುತ ಪಡಿಸಿದ ಚಿತ್ಪಾವನಿ ಭಾಷೆಯ ಯಕ್ಷಗಾನ

Post Views: 234 ಚಿತ್ಪಾವನರಿಂದ ಗರುಡ ಗರ್ವಭಂಗ ************************** ಈ ದಿನ ಅಂದರೆ ೨೮/ ೬/ ೨೦೨೬ ನೇ ಆದಿತ್ಯವಾರ ಚಿತ್ಪಾವನ ಸಮಾಜಕ್ಕೆ ಒಂದು ಹೆಮ್ಮೆಯ ದಿನ. ಇದಕ್ಕೆ ಕಾರಣ ಈ...

ಹೊಸಮಠದ ಚಿತ್ಪಾವನರಿಂದ ದೇಗುಲ ದರ್ಶನ, ಗೋಶಾಲೆ, ಸೇವಾಶ್ರಮ ಮತ್ತು ಅಳಿಕೆ ಸತ್ಯಸಾಯಿ ವಿದ್ಯಾಸಂಸ್ಥೆಗೆ ಒಂದು ದಿನದ ಭೇಟಿ (31 ಮೇ, ಭಾನುವಾರ)

Post Views: 95 ಹೊಸಮಠದ ಚಿತ್ಪಾವನರಿಂದ ದೇಗುಲ ದರ್ಶನ, ಗೋಶಾಲೆ, ಸೇವಾಶ್ರಮ ಮತ್ತು ಅಳಿಕೆ ಸತ್ಯಸಾಯಿ ವಿದ್ಯಾಸಂಸ್ಥೆಗೆ ಒಂದು ದಿನದ ಭೇಟಿ (31 ಮೇ, ಭಾನುವಾರ) ವಿಟ್ಲ ಪಂಚಲಿಂಗೇಶ್ವರ ದೇವಸ್ಥಾನ, ಪದ್ಯಾಣ...

ಡಾ. ಚಂದ್ರಶೇಖರ ದಾಮ್ಲೆಯವರಿಗೆ ‘ಯಕ್ಷಗಾನ ಕಲಾರಂಗ ಪ್ರಶಸ್ತಿ

Post Views: 140   ಉಡುಪಿಯ ಯಕ್ಷಗಾನ ಕಲಾರಂಗ, ತಲ್ಲೂರು ಕನಕಾ-ಅಣ್ಣಯ್ಯ ಶೆಟ್ಟಿ ನೆನಪಿನಲ್ಲಿ ವಿದ್ವಾಂಸರಿಗೆ ನೀಡುವ ‘ಯಕ್ಷಗಾನ ಕಲಾರಂಗ ಪ್ರಶಸ್ತಿ’ಗೆ ನಿವೃತ್ತ ಪ್ರಾಧ್ಯಾಪಕ, ಶಿಕ್ಷಣ ತಜ್ಞ, ಲೇಖಕ,ಪ್ರಸಂಗ ಕರ್ತ, ಕಲಾವಿಮರ್ಶಕ,...

ಬೆಳ್ತಂಗಡಿ ತಾಲೂಕು ಚಿತ್ಪಾವನ ಬ್ರಾಹ್ಮಣರ ಸಂಘ -ಮಹಿಳಾ ಘಟಕದ ಪ್ರಥಮ ಸಭೆ ಮತ್ತು ಹೊಸಮಠ ವಠಾರದ ಕುಟುಂಬ ಸಮ್ಮಿಲನ ಕಾರ್ಯಕ್ರಮ

Post Views: 125 ****** -***** ಬೆಳ್ತಂಗಡಿ ತಾಲೂಕು ಚಿತ್ಪಾವನ ಬ್ರಾಹ್ಮಣರ ಸಂಘದ ಮಹಿಳಾ ಘಟಕದ ಪ್ರಥಮ ಸಭೆ ಮತ್ತು ಹೊಸಮಠ ವಠಾರದ ಕುಟುಂಬ ಸಮ್ಮಿಲನ ಕಾರ್ಯಕ್ರಮ ಶ್ರೀ ಅಜಿತ ಹೆಬ್ಬಾರ್...

ಮಾಳ ಶ್ರೀ ಪರಶುರಾಮ ದೇವಸ್ಥಾನದಲ್ಲಿ ವಸಂತ ವೇದ ಪಾಠ ಮತ್ತು ಸಂಸ್ಕಾರ ಶಿಬಿರ

Post Views: 149 ಮಾಳ ಶ್ರೀ ಪರಶುರಾಮ ದೇವಸ್ಥಾನದಲ್ಲಿ ವಸಂತ ವೇದ ಪಾಠ ಮತ್ತು ಸಂಸ್ಕಾರ ಶಿಬಿರ ಕಾರ್ಕಳ ತಾಲೂಕು ಎಡಪಾಡಿ ಶ್ರೀ ಕಾಲಕಾಮ ಪರಶುರಾಮ ದೇವಸ್ಥಾನದಲ್ಲಿ ಹತ್ತು ದಿನಗಳ ವಸಂತ...

ಡಿ. ಹರೀಶ್ ತಾಮನ್ಕರ್ ರವರ ಶಿಕ್ಷಣ ಕ್ರಾಂತಿ

Post Views: 101 ಡಿ. ಹರೀಶ್ ತಾಮನ್ಕರ್ ಅವರು ಕೊಡಗು ಜಿಲ್ಲೆಯ ಗೋಣಿಕೊಪ್ಪ ಎಂಬಲ್ಲಿ ಕಳೆದ 19 ವರ್ಷಗಳಿಂದ ಶಿಕ್ಷಣ ಕ್ರಾಂತಿ ಪ್ರಾರಂಭಿಸಿದ್ದಾರೆ. ಅವರು ವಿದ್ಯಾನಿಕೇತನ ಪಿಯು ಕಾಲೇಜನ್ನು 2007 ರಲ್ಲಿ...

ಪರಶುರಾಮ ಜಯಂತಿ – ಚಿತ್ಪಾವನ ಬ್ರಾಹ್ಮಣ ಸಂಘ, ಮೖಸೂರು

Post Views: 149 ದಿನಾಂಕ 19/04/2026, ಭಾನುವಾರದಂದು ಚಿತ್ಪಾವನ ಬ್ರಾಹ್ಮಣ ಸಂಘ, ಮೖಸೂರು ವತಿಯಿಂದ ಮೖಸೂರಿನ ಬಿ. ಎಸ್. ಎಸ್. ವಿದ್ಯೋದಯ ಶಿಕ್ಷಣ ಸಂಸ್ಥೆ ಆವರಣದಲ್ಲಿ ಸಂಜೆ 5-30 ರಿಂದ 8...

Recently Added

View All

ಪನೀರ್ ಸತ್ಯ: ನಿಜ ಮತ್ತು ನಕಲಿ ಪನೀರ್ ನಡುವಿನ ವ್ಯತ್ಯಾಸ – ಡಾ ರವಿಕಿರಣ ಪಟವರ್ಧನ

Post Views: 150 🥛 ಪನೀರ್ ಸತ್ಯ: ನಿಜ ಮತ್ತು ನಕಲಿ ಪನೀರ್ ನಡುವಿನ ವ್ಯತ್ಯಾಸ ಡಾ ರವಿಕಿರಣ ಪಟವರ್ಧನ. ಪಟವರ್ಧನ ಆಯುರ್ವೇದ ಕ್ಲಿನಿಕ್.ಶಿರಸಿ.581401. 9242122874. ಪನೀರ್ — ಭಾರತೀಯ ಅಡುಗೆಮನೆಯ...

ವಾಸುದೇವ ಬಲವಂತ ಫಡ್ಕೆ

Post Views: 246 ವಾಸುದೇವ ಬಲವಂತ ಫಡ್ಕೆ ೪ ನವೆಂಬರ್ ೧೮೪೫ – ೧೭ ಫೆಬ್ರವರಿ ೧೮೮೩ ಒಬ್ಬ ಸ್ವಾತಂತ್ರ್ಯ ಹೋರಾಟಗಾರರು ಫಡ್ಕೆ ಒಂದು ಮರಾಠಿ ಚಿತ್ಪಾವನ ಬ್ರಾಹ್ಮಣ ಕುಟುಂಬದಲ್ಲಿ ಮಹಾರಾಷ್ಟ್ರ...

Sliding Doors with Mosquito Net – Contact Vaishali Marathe – 9900820187

Post Views: 372 Along with the existing doors, these mesh doors can be fixed. Easy to use. For actual usage refer below video...

Terms & Conditions – For Classified

Post Views: 256 ಸುದ್ದಿ ಸುವಿಧಾ ಕೇವಲ ವರ್ಗೀಕೃತ ಜಾಹೀರಾತುಗಳನ್ನು ಪ್ರಕಟಿಸುವ ವೇದಿಕೆಯಷ್ಟೇ ಆಗಿದ್ದು, ಜಾಹೀರಾತಿನಲ್ಲಿ ನೀಡಲಾದ ಯಾವುದೇ ಉತ್ಪನ್ನ ಅಥವಾ ಸೇವೆಯ ಗುಣಮಟ್ಟ, ಸ್ಥಿತಿ, ಬೆಲೆ ಅಥವಾ ನೈಜತೆಯ ಬಗ್ಗೆ...

Nikon Z7 – 5 year old – Body only – for sale – Contact : 9591522880

Post Views: 317 Nikon Z7 5 year old Body only for sale Shutter : 165000 approximately Well maintained always kept in dry cabinet...

ನರ್ಮದಾ ಪರಿಕ್ರಮ – ಅಶೋಕ್ ಪಟ್ವರ್ಧನ್ – ಒಂದು ಆಧ್ಯಾತ್ಮಿಕ ಅನುಭವ

Post Views: 397 ನರ್ಮದಾ ಪರಿಕ್ರಮ — ಅಶೋಕ್ ಪಟ್ವರ್ಧನ್ ಮತ್ತು ಸಹಚರರು ಇತ್ತೀಚೆಗೆ ಕೈಗೊಂಡ ಪವಿತ್ರ ನರ್ಮದಾ ಪರಿಕ್ರಮದ ಅನುಭವ. — ಇದು ಕೇವಲ ಯಾತ್ರೆಯಲ್ಲ, ಆಧ್ಯಾತ್ಮಿಕ ಅನುಭವ. –ನರ್ಮದಾ...

ಕಡ್ಲೆ vs ಬಿಳಿ ಕಡ್ಲೆ ⚪: ಪೌಷ್ಟಿಕಾಂಶ ಮತ್ತು ಆರೋಗ್ಯ ಲಾಭಗಳು – ಡಾ ರವಿಕಿರಣ ಪಟವರ್ಧನ.

Post Views: 249 ದೀಪೋತ್ಸವದ ಉಸುಳಿ ವಿಜ್ಞಾನ 🪔 ಕಾರ್ತಿಕ–ಮಾರ್ಗಶಿರ ಮಾಸ… ದೀಪದ ಬೆಳಕಿನ ಕಂಪನ… ದೇವಸ್ಥಾನಗಳ ಗಂಟೆಯ ನಿನಾದ… ಮಂಟಪ–ಗೋಪುರಗಳ ನಡುವೆ ಹರಡುವ ಪ್ರಸಾದದ ಪರಿಮಳ…ಕೆಲವು ದೇವಸ್ಥಾನಗಳು ಪ್ರಸಾದ ರುಚಿಗಾಗಿಯೇ...

ವೈದ್ಯಕೀಯ ಸಲಕರಣೆ ಮಾಹಿತಿ ಕೇಂದ್ರ

Post Views: 238 ವೈದ್ಯಕೀಯ ಸಲಕರಣೆ ಮಾಹಿತಿ ಕೇಂದ್ರ. ಗಣಪತಿ ನೀಲಕಂಠ ಪಟವರ್ಧನ್ ಪ್ರತಿಷ್ಠಾನ, ಶಿರಸಿ C/O ಡಾ. ರವಿಕಿರಣ ಪಟವರ್ಧನ ಆಯುರ್ವೇದ ವೈದ್ಯ, ಹೋಸಪೇಟೆ ರಸ್ತೆ, ಶಿರಸಿ 581401.  ...

ಚಳಿಗಾಲದ ಆರೋಗ್ಯ ಮಾರ್ಗದರ್ಶಿ-ಡಾ. ರವಿಕಿರಣ ಪಟವರ್ಧನ

Post Views: 260 ಆಯುರ್ವೇದ ವೈದ್ಯ ಡಾ. ಪಟವರ್ಧನರ ಮನೆ, ಹೊಸಪೇಟೆ ರಸ್ತೆ ಶಿರಸಿ – 581401 ಸಾಮಾನ್ಯವಾಗಿ ನವೆಂಬರ್ ತಿಂಗಳಿನಿಂದ ಫೆಬ್ರವರಿ ಅಂತ್ಯದವರೆಗೂ ಚಳಿಗಾಲವಿರುತ್ತದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಅಲ್ನಿನೊ...

Informative youtube video about Chitpavan Brahmins

Post Views: 176 Courtesy: Scholarspace with Anubhav

Watch our latest podcasts