****** -*****
ಬೆಳ್ತಂಗಡಿ ತಾಲೂಕು ಚಿತ್ಪಾವನ ಬ್ರಾಹ್ಮಣರ ಸಂಘದ ಮಹಿಳಾ ಘಟಕದ ಪ್ರಥಮ ಸಭೆ ಮತ್ತು ಹೊಸಮಠ ವಠಾರದ ಕುಟುಂಬ ಸಮ್ಮಿಲನ ಕಾರ್ಯಕ್ರಮ ಶ್ರೀ ಅಜಿತ ಹೆಬ್ಬಾರ್ ಹೊಸಮಠ ಇವರ ಮನೆಯಲ್ಲಿ ಅದ್ದೂರಿಯಾಗಿ ನಡೆಯಿತು.
ಪ್ರಾರಂಭದಲ್ಲಿ ಒತ್ತು ಶಾವಿಗೆ, ರಸಾಯನ, ತೊವ್ವೆ ಯೊoದಿಗೆ ಅಜಿತ್ ಹೆಬ್ಬಾರ್ ಭರ್ಜರಿ ಸ್ವಾಗತ ಕೋರಿದರು. ಸಮಯಕ್ಕೆ ಸರಿಯಾಗಿ ಸಭೆ ಆರಂಭ ಗೊಂಡಿತು. ಕಾರ್ಯಕ್ರಮ ದಲ್ಲಿ ಗಮನ ಸೆಳೆದದ್ದು ಶ್ರೀಮತಿ ಸೌಮ್ಯ ಪ್ರದೀಪ್ ಅವರ ಯೋಗದ ಮೂಲಕ ಸ್ತ್ರೀ ಸ್ವಾಸ್ತ್ಯ ಬಗ್ಗೆ ಅದ್ಭುತ ಮಾಹಿತಿ ಕಾರ್ಯಕ್ರಮ. ಅವರ presentation ತುಂಬಾ ಚೆನ್ನಾಗಿತ್ತು.
ನಂತರ ಶ್ರೀಮತಿ ಪಂಚಮಿ ಗೋಗಟೆ ಯವರ ರಸ ಪ್ರಶ್ನೆ, ಮಹಿಳೆಯರಿಗೆ ಆಟಗಳು ಎಲ್ಲಾ ಮಹಿಳೆಯರ ಮನಸ್ಸು ಮುದಗೊಳಿಸಿತು. ಶ್ರೀಮತಿ ವಿದ್ಯಾ ಗೊಗಟೆಯವರ ಸಮಾಜ ಸೇವೆ ಗುರುತಿಸಿ ಗೌರವಿಸಲಾಯಿತು ಹೊಸಮಠದ ಹೆಚ್ಚಿನ ಮಹಿಳೆಯರು ಭಾಗವಹಿಸಿದ್ದಲ್ಲದೆ ಮುಂಡಾಜೆ, ಬೆಳ್ತಂಗಡಿ, ಸೂಳಬೆಟ್ಟು, ಶಿಶಿಲ ದಿಂದಲೂ ಮಹಿಳೆಯರು ಇದ್ದರು. ಮಹಿಳೆಯರಿಗೆ ಪ್ರೊತ್ಸಾಹ ನೀಡಲು ವಠಾರ ದ ಪುರುಷರು ಅಧಿಕ ಸಂಖ್ಯೆ ಯಲ್ಲಿ ಭಾಗವಹಿಸಿದ್ದರು. ಮಧ್ಯಾಹ್ನ ಭರ್ಜರಿ ಊಟದ ವ್ಯವಸ್ಥೆ ಅಜಿತ್ ಹೆಬ್ಬಾರ್ ಕುಟುಂಬಸ್ಥ ರು ಆಯೋಜಿಸಿದ್ದರು. ಮಹಿಳಾ ಘಟಕ ದ ಅಧ್ಯಕ್ಷೆ ಅಶ್ವಿನಿ ಹೆಬ್ಬಾರ್ ಕಾರ್ಯದರ್ಶಿ ದೀಪಾಲಿ ಡೋಂಗ್ರೆ ಕಾರ್ಯಕ್ರಮ ಒಳ್ಳೆ ಯೋಜನಾ ಬದ್ಧವಾಗಿ ಆಯೋಜಿಸಿದ್ದರು
ಶ್ರೀ ಅಜಿತ್ ಹೆಬ್ಬಾರ್ ಆಶಾ ಹೆಬ್ಬಾರ್ ಪಂಚಮಿ ಗೋಗಟೆ, ಆಶಾ ಹೆಬ್ಬಾರ್, ಸೌಮ್ಯಾ ಹೆಬ್ಬಾರ್,ವಿದ್ಯಾ ಗೋಗಟೆ ಉಶಾಕಿರಣ್ ಮತ್ತು ವಠಾರದ ಮಹಿಳೆ ಯರು ಕಾರ್ಯಕ್ರಮ ವನ್ನು ಒಳ್ಳೆ ಮುತುವರ್ಜಿ ಯಿಂದ ನಿರ್ವಹಿಸಿದರು. ಕಾರ್ಯಕ್ರಮ ದಲ್ಲಿ ಸಂಖ್ಯೆ ಸುಮಾರು 80 ಉತ್ತಮ ಸಂಖ್ಯೆ. ಈ ರೀತಿ ಕಾರ್ಯಕ್ರಮ ಗಳು. ಮಹಿಳೆಯರಿಗೆ ಉತ್ತಮ exposure ಕೊಟ್ಟು ಪರಸ್ಪರ ಅರಿವಿಗೆ ಸಮಾಜದ ಒಗ್ಗಟ್ಟು ಮೂಡಲು ಉತ್ತಮ ಹೆಜ್ಜೆ.
















