Sunday , 24 May 2026

ಅಳಂಬ..ಬಾಲಕೃಷ್ಣ ಸಹಸ್ರಬುದ್ಧೆ ಮುಂಡಾಜೆ. – ಭಾಗ-೧

ಅಳಂಬ..೧
**********
(ಇದೊಂದು ಕಾಲ್ಪನಿಕ ಕಾದಂಬರಿ. ಇದರಲ್ಲಿ ಬರುವ ಎಲ್ಲ ಪಾತ್ರಗಳು, ಸನ್ನಿವೇಶಗಳು, ಕಾಲ, ವ್ಯವಹಾರ ಲೇಖಕನ ಕಲ್ಪನೆಯಾದರೂ ಬರುವಂಥ ಊರುಗಳ ಹೆಸರು, ಸಂಬಂಧ, ವೃತ್ತಿಗಳಿಗೆ ಮಾತ್ರ ಕುತ್ಲೂರು-ನಾರಾವಿ ಗ್ರಾಮದ ಹಳ್ಳಿಗಳೇ ಪ್ರೇರಣೆ. ಈ ಸರಣಿ ಓದುಗರ ಮನಸ್ಸಿಗೆ ಆನಂದ ನೀಡುವ ಉದ್ದೇಶದಿಂದ ಪ್ರಾರಂಭಿಸಿದ್ದೇನೆ. ಓದಲು ಉದ್ದವಾಗದಂತೆ ಸಣ್ಣ ಸಣ್ಣ ಕಂತುಗಳನ್ನು ನೀಡುತ್ತೇನೆ. ಬಹುಷ ವಾರಕ್ಕೆ ಎರಡು ದಿನ ಅಂದರೆ ಶನಿವಾರ ಮತ್ತು ಬುಧವಾರ ಪ್ರಕಟಿಸುತ್ತೇನೆ. ಖಷಿಯಾದರೆ ಒಂದು ಮೆಚ್ಚುಗೆ ಇರಲಿ ಅಥವಾ ಒಂದು ವಾಕ್ಯದ್ದಾದರೂ ಪರವಾಗಿಲ್ಲ ಪ್ರೇರಣೆ ನೀಡುವ ಎರಡು ಮಾತುಗಳಿರಲಿ. ಯಾಕೆಂದರೆ ನಿಮ್ಮ ಒಂದು ಮೆಚ್ಚುಗೆ ಹತ್ತು ಪುಟಗಳ ಬರವಣಿಗೆಗೆ ಪ್ರೇರಣೆ ನೀಡುವುದರಲ್ಲಿ ಸಂಶಯವಿಲ್ಲ. ಎಲ್ಲ ಸಾಹಿತ್ಯ ಪ್ರಿಯರಿಗೆ ನಮಸ್ಕಾರಗಳು… ಅಂತೆಯೇ ಈ ಕಾದಂಬರಿಯ ಕಾಲಮಾನವೂ ಸಾಧಾರಣ ಅರ್ಧ ಶತಮಾನಕ್ಕೂ ಹಿಂದಿನ ದಿನಗಳನ್ನು ನೆನಪಿಸುವಂಥದ್ದು. ಮತ್ತೊಮ್ಮೆ ನಿಮ್ಮ ಸಹಕಾರವನ್ನು ಕೋರುತ್ತಿದ್ದೇನೆ.)

ಅಳಂಬ.. ಎಲ್ಲರ ದೃಷ್ಟಿಯಲ್ಲಿ ಇದು ಕುಗ್ರಾಮ. ಆದರೆ ಪ್ರಕೃತಿಯ ಸೌಂದರ್ಯ ತಿಳಿದವರಿಗೆ, ಪ್ರಕೃತಿಯೊಡನೆ ಬೆರೆತು ಬಾಳುವವರಿಗೆ ಅಥವಾ ಅಳಂಬದವರಿಗೆ ಇದು ಸ್ವರ್ಗವೇ ಆಗಿದೆ. ವಾಹನಗಳ ಓಡಾಟವಿಲ್ಲ, ಕಳ್ಳಕಾಕರ ಭಯವಿಲ್ಲ, ಹೋಟೇಲು ಅಂಗಡಿಗಳಿಲ್ಲ, ಶಾಲಾ ಕಾಲೇಜುಗಳಿಲ್ಲ, ಆಸ್ಪತ್ರೆ ಎಂಬುದಿಲ್ಲ, ಕಾಲು ದಾರಿಯ ಓಡಾಟವೇ ಎಲ್ಲ, ಜಾತಿ ಜಾತಿಗಳೊಳಗೆ ಬಡಿದಾಟಗಳಿಲ್ಲ, ದೇವಸ್ಥಾನ ಗುಡಿಗಳಿಲ್ಲ, ಮೇಲು ಕೀಳುಗಳೆಂಬ ಭಾವಗಳಿಲ್ಲ… ಹೀಗೆ ಹತ್ತಾರು ಇಲ್ಲಗಳ ನಡುವೆ ಇರುವುದಾದರೂ ಏನೆಂದು ಕೊಂಡಾಗ ಸ್ವರ್ಗ ಮಾತ್ರ ಇಲ್ಲಿದೆ ಎನ್ನಬಹುದು. ಯಾಕೆಂದರೆ ಸ್ವರ್ಗದಲ್ಲಿ ಮೇಲೆ ಹೇಳಿದ ಯಾವುದೇ ನಾಗರಿಕ ಸೌಲಭ್ಯಗಳಿಲ್ಲದಿರುವುದರಿಂದ ಹಾಗೂ ಅಳಂಬವು ಆ ಇಲ್ಲದ ಸೌಲಭ್ಯಗಳಿಂದಲೇ ತನ್ನ ಅಸ್ತಿತ್ವವನ್ನು ಕಂಡುಕೊಂಡದ್ದರಿಂದ ಪೂರ್ಣ ಸ್ವರ್ಗ ಅಲ್ಲದೆ ಇದ್ದರೂ ಇದು ಸ್ವರ್ಗದಂಥ ಸುಗ್ರಾಮ ಎಂದು ಹೇಳಬಹುದು.

ಹಾಗಾದರೆ ಇಲ್ಲೇನಿದೆ ಎಂದಾಗ ಮೊದಲನೆಯದಾಗಿ ಸ್ವಚ್ಛಂದ ಬದುಕಿದೆ. ಪರಿಶುದ್ಧವಾದ ಗಾಳಿ ಇದೆ. ಅಮೃತ ಸಮಾನವಾದ ನಿತ್ಯವೂ ಹರಿದು ಹೋಗುವ ಗಂಗಾಜಲವಿದೆ. ಸುತ್ತಮುತ್ತಲೂ ನಿತ್ಯ ಹರಿದ್ವರ್ಣದ ಕಾಡುಗಳಿವೆ. ದಿನಕ್ಕೆ ಒಂದೆರಡು ಸಲವಾದರೂ ಜಿಂಕೆ-ಕಡವೆ-ಕಾಡೆಮ್ಮೆ-ಕಾಡು ಹಂದಿಗಳ ಸಹಜ ಬದುಕಿನ ಸಂಚಾರ ಕಾಣುವ ಭಾಗ್ಯವಿದೆ. ಅಪರೂಪಕ್ಕೆ ಹೆಬ್ಬುಲಿಯ ದರ್ಶನವೂ ಆಗುವುದಿದೆ. ಅಂತೆಯೆ ಕಾಡು ಪ್ರಾಣಿಗಳಿಂದಾಗಿ ಅಳಂಬದಲ್ಲಿ ಮಾನವರು ಜೀವ ಕಳಕೊಂಡ ಉದಾಹರಣೆಯೇ ಇಲ್ಲವೆಂಬ ಖ್ಯಾತಿಯೂ ಇದೆ. ಹಕ್ಕಿಗಳ ಕಲರವ ಮನೆಯೊಳಗಿಂದಲೆ ಬರುತ್ತದೋ ಎಂಬ ಭಾವ ಬರುವಂಥ ಖೇಚರಿಗಳ ಹಿತವಾದ ಸಾಂಗತ್ಯವಿದೆ.

ಮಂಗಗಳು ನಿತ್ಯವೂ ಬಂದರೂ ಕೃಷಿ-ಬೆಳೆಯನ್ನು ಹಾಳು ಮಾಡದಿರುವಂಥ ಆಹಾರ ವ್ಯವಸ್ಥೆ ಕಾಡಿನೊಳಗೆ ಸರ್ವ ಕಾಲದಲ್ಲೂ ಇದೆ. ಬೇಸಿಗೆಯಲ್ಲಿ ತಂಪಾದ, ಚಳಿಗಾಲದಲ್ಲಿ ಬೆಚ್ಚಗಿನ, ಮಳೆಗಾಲದಲ್ಲಿ ಪ್ರವಾಹ ರಹಿತವಾದ ಸರ್ವ ಋತುಮಾನಗಳು ಮಾನವರಿಗಾಗಲಿ ಅನ್ಯ ಜೀವಿಗಳಿಗಾಗಲಿ ಹಿತಾನುಭವ ಕೊಡುತ್ತಿದೆ. ಆಗೊಮ್ಮೆ ಈಗೊಮ್ಮೆ ಬೃಹದಾಕಾರದ ಸರಿಸೃಪಗಳೊ ಸಣ್ಣ ಸಣ್ಣ ವಿಷದ ಹಾವುಗಳೊ ಬಂದು ಹೋಗುವುದೂ ಕಾಣಸಿಗುತ್ತದೆ. (ಜನರೇ ಹೆದರಿ ಅಂಥ ಹಾವುಗಳನ್ನು ಕೊಂದದ್ದೇ ಜಾಸ್ತಿ ಹೊರತು ಹಾವಿನ ಕಡಿತಕ್ಕೊಳಗಾದ ಜನರ ಸಮಾಚಾರ ತೀರಾ ವಿರಳವಿದೆ.) ಪಟ್ಟಣಗಳಿಂದ ವರುಷಕ್ಕೊಂದು ಕೆ.ಜಿ. ತರಕಾರಿಯನ್ನಾಗಲಿ ಹಣ್ಣುಗಳನ್ನಾಗಲಿ ತಾರದೆಯೂ ಪೌಷ್ಟಿಕಾಂಶಗಳಿಗೆ ಒಂದಿನಿತೂ ಕೊರತೆಯಾಗದ ಹಲವು ವೈವಿಧ್ಯಗಳ ಹೂ ಹಣ್ಣು ತರಕಾರಿ ಯಥೆಚ್ಛವಾಗಿ ದೊರೆಯುತ್ತಿರುತ್ತದೆ. ರಾತ್ರಿ ಬೆಳದಿಂಗಳ ಬೆಳಕಿನ ಜತೆಗೆ ಅಮಾವಾಸ್ಯೆಯ ಗಾಢಾಂಧಕಾರಗಳನ್ನು ಅನುಭವಿಸಿದ ಸಂತೃಪ್ತಿ ಇದೆ. ಕಷ್ಟವೋ ಸುಖವೋ ಯಾರಿಗೇ ಬಂದರೂ ತಮ್ಮದೇ ಎನ್ನುವ ಭಾವದಿಂದ ಪರಸ್ಪರ ಸಹಕರಿಸಿ ಸ್ಪಂದಿಸುವ ಗುಣ ಸರ್ವರಲ್ಲೂ ಇದೆ. ಎಲ್ಲಕ್ಕಿಂತ ಹೆಚ್ಚಾಗಿ ತಮ್ಮ ವ್ಯಾಪ್ತಿಯ ಅರಿವಿದೆ… (ಮೆಚ್ಚಿಗೆಯಾದರೆ ಮುಂದೆ ಇನ್ನೂ ಇದೆ.)
**************************
ಬಾಲಕೃಷ್ಣ ಸಹಸ್ರಬುದ್ಧೆ ಮುಂಡಾಜೆ.

Events/Announcements

Advertisement

ಮಾಳ ಶ್ರೀ ಪರಶುರಾಮ ದೇವಸ್ಥಾನದಲ್ಲಿ ವಸಂತ ವೇದ ಪಾಠ ಮತ್ತು ಸಂಸ್ಕಾರ ಶಿಬಿರ

Post Views: 35 ಮಾಳ ಶ್ರೀ ಪರಶುರಾಮ ದೇವಸ್ಥಾನದಲ್ಲಿ ವಸಂತ ವೇದ ಪಾಠ ಮತ್ತು ಸಂಸ್ಕಾರ ಶಿಬಿರ ಕಾರ್ಕಳ ತಾಲೂಕು ಎಡಪಾಡಿ ಶ್ರೀ ಕಾಲಕಾಮ ಪರಶುರಾಮ ದೇವಸ್ಥಾನದಲ್ಲಿ ಹತ್ತು ದಿನಗಳ ವಸಂತ...

ಡಿ. ಹರೀಶ್ ತಾಮನ್ಕರ್ ರವರ ಶಿಕ್ಷಣ ಕ್ರಾಂತಿ

Post Views: 14 ಡಿ. ಹರೀಶ್ ತಾಮನ್ಕರ್ ಅವರು ಕೊಡಗು ಜಿಲ್ಲೆಯ ಗೋಣಿಕೊಪ್ಪ ಎಂಬಲ್ಲಿ ಕಳೆದ 19 ವರ್ಷಗಳಿಂದ ಶಿಕ್ಷಣ ಕ್ರಾಂತಿ ಪ್ರಾರಂಭಿಸಿದ್ದಾರೆ. ಅವರು ವಿದ್ಯಾನಿಕೇತನ ಪಿಯು ಕಾಲೇಜನ್ನು 2007 ರಲ್ಲಿ...

ಪರಶುರಾಮ ಜಯಂತಿ – ಚಿತ್ಪಾವನ ಬ್ರಾಹ್ಮಣ ಸಂಘ, ಮೖಸೂರು

Post Views: 52 ದಿನಾಂಕ 19/04/2026, ಭಾನುವಾರದಂದು ಚಿತ್ಪಾವನ ಬ್ರಾಹ್ಮಣ ಸಂಘ, ಮೖಸೂರು ವತಿಯಿಂದ ಮೖಸೂರಿನ ಬಿ. ಎಸ್. ಎಸ್. ವಿದ್ಯೋದಯ ಶಿಕ್ಷಣ ಸಂಸ್ಥೆ ಆವರಣದಲ್ಲಿ ಸಂಜೆ 5-30 ರಿಂದ 8...

ಸಚಿನ್ ಭಿಡೆಯವರ ನಿರಂತರ ಸಮಾಜ ಸೇವೆಯನ್ನು ಗುರುತಿಸಿ ಗೌರವಿಸಲಾಯಿತು

Post Views: 54 ಮುಂಡಾಜೆ ವನದುರ್ಗ ದೇವಸ್ಥಾನದಲ್ಲಿ ಆಪದ್ಭಾಂಧವ ಸಚಿನ್ ಭಿಡೆಯವರ ನಿರಂತರ ಸಮಾಜ ಸೇವೆಯನ್ನು ಗುರುತಿಸಿ ಗೌರವಿಸಲಾಯಿತು. ಅಭಿನಂದನೆಗಳು🌹

ಸಂತೃಪ್ತಿ ಫಡಕೆ – ಆಧಾರ್ ಸರ್ವಿಸ್ ನ ಅತ್ಯುತ್ತಮ ಸೇವೆಗೆ ವಿಭಾಗೀಯ ಪ್ರಶಸ್ತಿ

Post Views: 47 ಸಂತೃಪ್ತಿ ಫಡಕೆ ಪೋಸ್ಟ್ ಮಾಸ್ಟರ್ ಕೊಯ್ಯುರು ಬೆಳ್ತಂಗಡಿ ಅವರಿಗೆ ಆಧಾರ್ ಸರ್ವಿಸ್ ನ ಅತ್ಯುತ್ತಮ ಸೇವೆಗೆ ವಿಭಾಗೀಯ ಪ್ರಶಸ್ತಿ. ಅಭಿನಂದನೆಗಳು

ಶ್ರೀ ಮುಂಡಾಜೆ ಅನಂತ ತಾಮನ್ಕರ್ ಮೈಸೂರು – ಪುಸ್ತಕ ಬಿಡುಗಡೆ ಸಮಾರಂಭ

Post Views: 60 ಮೈಸೂರಿನಲ್ಲಿ ಶ್ರೀ ಮುಂಡಾಜೆ ಅನಂತ ತಾಮನ್ಕರ್ ಅವರ ಎರಡು ಪುಸ್ತಕ ಬಿಡುಗಡೆ ಸಮಾರಂಭ ನಡೆಯಿತು

ಸ್ವಾಗತ – ಖ್ಯಾತ ವೈದ್ಯ,ವಿಜ್ಞಾನಿ ಪ್ರದೀಪ್ ಭಿಡೆ

Post Views: 130 ಮುಂಡಾಜೆ ಭಿಡೆ ಮನೆಯ, ಪ್ರಸ್ತುತ ಅಮೆರಿಕದ ಫ್ಲೋರಿಡಾ ಯೂನಿವರ್ಸಿಟಿಯಲ್ಲಿ “ಮಕ್ಕಳಲ್ಲಿ ಗುರುತಿಸಲಾಗದ ಖಾಯಿಲೆಗಳ” ವಿಭಾಗದ ಮುಖ್ಯಸ್ಥರಾಗಿರುವ ಖ್ಯಾತ ವೈದ್ಯ,ವಿಜ್ಞಾನಿ ಪ್ರದೀಪ್ ಭಿಡೆಯವರು ಹುಟ್ಟೂರಿಗೆ ಆಗಮಿಸಿದ ಸಂದರ್ಭ ಮುಂಡಾಜೆಯ...

First Rank with Gold Medal in M.Com at the 44th Convocation of Mangalore University ✨-Srujana Chiplunkar

Post Views: 100 Srujana Chiplunkar, Daughter of Sudarshan Chiplunkar and Suvarna Chiplunkar, Phajinadka, secured First Rank with Gold Medal in M.Com. Let’s hear...

🏆 INTERNATIONAL ACHIEVEMENT: PROF. SOURABH R. CHIPLOONKAR

Post Views: 72 🏆 INTERNATIONAL ACHIEVEMENT: PROF. SOURABH R. CHIPLOONKAR Thrilled to announce a major competitive milestone from the 2nd Grand RCC FIDE...

ವಸಂತ ವೇದ ಪಾಠ ಶಿಬಿರ ಮತ್ತು ಹೆಣ್ಣು ಮಕ್ಕಳಿಗೆ ಸಂಸ್ಕಾರ ಶಿಕ್ಷಣ

Post Views: 84 *ಶ್ರೀ ಕಾಲಕಾಮ ಪರಶುರಾಮ ದೇವಸ್ಥಾನ* *ಎಡಪಾಡಿ ಮಾಳ** *ವಸಂತ ವೇದ ಪಾಠ ಶಿಬಿರ ಮತ್ತು ಹೆಣ್ಣು ಮಕ್ಕಳಿಗೆ ಸಂಸ್ಕಾರ ಶಿಕ್ಷಣ…* *ಆತ್ಮೀಯರೇ,* ಶ್ರೀ ಕಾಲಕಾಮ ಪರಶುರಾಮ ದೇವಸ್ಥಾನ...

Recently Added

View All

ಪನೀರ್ ಸತ್ಯ: ನಿಜ ಮತ್ತು ನಕಲಿ ಪನೀರ್ ನಡುವಿನ ವ್ಯತ್ಯಾಸ – ಡಾ ರವಿಕಿರಣ ಪಟವರ್ಧನ

Post Views: 79 🥛 ಪನೀರ್ ಸತ್ಯ: ನಿಜ ಮತ್ತು ನಕಲಿ ಪನೀರ್ ನಡುವಿನ ವ್ಯತ್ಯಾಸ ಡಾ ರವಿಕಿರಣ ಪಟವರ್ಧನ. ಪಟವರ್ಧನ ಆಯುರ್ವೇದ ಕ್ಲಿನಿಕ್.ಶಿರಸಿ.581401. 9242122874. ಪನೀರ್ — ಭಾರತೀಯ ಅಡುಗೆಮನೆಯ...

ವಾಸುದೇವ ಬಲವಂತ ಫಡ್ಕೆ

Post Views: 146 ವಾಸುದೇವ ಬಲವಂತ ಫಡ್ಕೆ ೪ ನವೆಂಬರ್ ೧೮೪೫ – ೧೭ ಫೆಬ್ರವರಿ ೧೮೮೩ ಒಬ್ಬ ಸ್ವಾತಂತ್ರ್ಯ ಹೋರಾಟಗಾರರು ಫಡ್ಕೆ ಒಂದು ಮರಾಠಿ ಚಿತ್ಪಾವನ ಬ್ರಾಹ್ಮಣ ಕುಟುಂಬದಲ್ಲಿ ಮಹಾರಾಷ್ಟ್ರ...

Sliding Doors with Mosquito Net – Contact Vaishali Marathe – 9900820187

Post Views: 218 Along with the existing doors, these mesh doors can be fixed. Easy to use. For actual usage refer below video...

Terms & Conditions – For Classified

Post Views: 182 ಸುದ್ದಿ ಸುವಿಧಾ ಕೇವಲ ವರ್ಗೀಕೃತ ಜಾಹೀರಾತುಗಳನ್ನು ಪ್ರಕಟಿಸುವ ವೇದಿಕೆಯಷ್ಟೇ ಆಗಿದ್ದು, ಜಾಹೀರಾತಿನಲ್ಲಿ ನೀಡಲಾದ ಯಾವುದೇ ಉತ್ಪನ್ನ ಅಥವಾ ಸೇವೆಯ ಗುಣಮಟ್ಟ, ಸ್ಥಿತಿ, ಬೆಲೆ ಅಥವಾ ನೈಜತೆಯ ಬಗ್ಗೆ...

Nikon Z7 – 5 year old – Body only – for sale – Contact : 9591522880

Post Views: 257 Nikon Z7 5 year old Body only for sale Shutter : 165000 approximately Well maintained always kept in dry cabinet...

ನರ್ಮದಾ ಪರಿಕ್ರಮ – ಅಶೋಕ್ ಪಟ್ವರ್ಧನ್ – ಒಂದು ಆಧ್ಯಾತ್ಮಿಕ ಅನುಭವ

Post Views: 317 ನರ್ಮದಾ ಪರಿಕ್ರಮ — ಅಶೋಕ್ ಪಟ್ವರ್ಧನ್ ಮತ್ತು ಸಹಚರರು ಇತ್ತೀಚೆಗೆ ಕೈಗೊಂಡ ಪವಿತ್ರ ನರ್ಮದಾ ಪರಿಕ್ರಮದ ಅನುಭವ. — ಇದು ಕೇವಲ ಯಾತ್ರೆಯಲ್ಲ, ಆಧ್ಯಾತ್ಮಿಕ ಅನುಭವ. –ನರ್ಮದಾ...

ಕಡ್ಲೆ vs ಬಿಳಿ ಕಡ್ಲೆ ⚪: ಪೌಷ್ಟಿಕಾಂಶ ಮತ್ತು ಆರೋಗ್ಯ ಲಾಭಗಳು – ಡಾ ರವಿಕಿರಣ ಪಟವರ್ಧನ.

Post Views: 189 ದೀಪೋತ್ಸವದ ಉಸುಳಿ ವಿಜ್ಞಾನ 🪔 ಕಾರ್ತಿಕ–ಮಾರ್ಗಶಿರ ಮಾಸ… ದೀಪದ ಬೆಳಕಿನ ಕಂಪನ… ದೇವಸ್ಥಾನಗಳ ಗಂಟೆಯ ನಿನಾದ… ಮಂಟಪ–ಗೋಪುರಗಳ ನಡುವೆ ಹರಡುವ ಪ್ರಸಾದದ ಪರಿಮಳ…ಕೆಲವು ದೇವಸ್ಥಾನಗಳು ಪ್ರಸಾದ ರುಚಿಗಾಗಿಯೇ...

ವೈದ್ಯಕೀಯ ಸಲಕರಣೆ ಮಾಹಿತಿ ಕೇಂದ್ರ

Post Views: 176 ವೈದ್ಯಕೀಯ ಸಲಕರಣೆ ಮಾಹಿತಿ ಕೇಂದ್ರ. ಗಣಪತಿ ನೀಲಕಂಠ ಪಟವರ್ಧನ್ ಪ್ರತಿಷ್ಠಾನ, ಶಿರಸಿ C/O ಡಾ. ರವಿಕಿರಣ ಪಟವರ್ಧನ ಆಯುರ್ವೇದ ವೈದ್ಯ, ಹೋಸಪೇಟೆ ರಸ್ತೆ, ಶಿರಸಿ 581401.  ...

ಚಳಿಗಾಲದ ಆರೋಗ್ಯ ಮಾರ್ಗದರ್ಶಿ-ಡಾ. ರವಿಕಿರಣ ಪಟವರ್ಧನ

Post Views: 220 ಆಯುರ್ವೇದ ವೈದ್ಯ ಡಾ. ಪಟವರ್ಧನರ ಮನೆ, ಹೊಸಪೇಟೆ ರಸ್ತೆ ಶಿರಸಿ – 581401 ಸಾಮಾನ್ಯವಾಗಿ ನವೆಂಬರ್ ತಿಂಗಳಿನಿಂದ ಫೆಬ್ರವರಿ ಅಂತ್ಯದವರೆಗೂ ಚಳಿಗಾಲವಿರುತ್ತದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಅಲ್ನಿನೊ...

Informative youtube video about Chitpavan Brahmins

Post Views: 126 Courtesy: Scholarspace with Anubhav

Watch our latest podcasts