ಡಾ|| ಅರವಿಂದ್ ಪಟವರ್ಧನ!!
ಇವರ ಬಗ್ಗೆ ವಿಶೇಷ ಲೇಖನ!
30 ಜೂನ್ 2025ರಂದು ನಿಧನರಾದರು. ಹುಟ್ಟು ಹಬ್ಬದಂದೇ ಮರಣಹೊಂದಿದ ಮಹಾನ್ ಚೀತನ.
ಪುಣೆಯ ತಿಲಕ ಆಯುರ್ವೇದ ಮಹಾವಿದ್ಯಾಲಯದಲ್ಲಿ ಬಿ ಎ ಎಮ್ ಎನ್ &
ಎಸ್, ಇಂಟಿಗ್ರೇಟೆಡ್ ಪದವಿಯಾಗಿತ್ತು.ಆದರೂ ಆಯುರ್ವೇದ ಚಿಕಿತ್ಸೆಯನ್ನೆ ಅನುಸರಿಸುತ್ತಿದ್ದರು. ವಿದ್ಯಾಭ್ಯಾಸದ ನಂತರ ಅವರ ತಂದೆ ವೈದ್ಯ ಗಣಪತಿರಾವ ಪಟವರ್ಧನ ರ ಜೊತೆಗೆ ಅನುಭವವನ್ನು ಪಡೆದರು.
ಗುಣಿ ಶಾಸ್ತ್ರಿಗಳ ಶಿಷ್ಯರಾಗಿದ್ದ ವೈದ್ಯ ಗಣಪತಿರಾವ ಪಟವರ್ಧನರು , ಸಂಶೋಧನೆ, ಹೊಸ ವಿಚಾರಗಳ ಆಗರಗಳಾಗಿದ್ದರು ಕೆಲವೇ ಕೆಲವು ವನಸ್ಪತಿಗಳಿಂದ ಅತ್ಯಂತ ಕಡಿಮೆ ಔಷಧಗಳಿಂದ ರೋಗಗಳನ್ನ ಗುಣಪಡಿಸುವ ಮಹಾನ್ ವಿಜ್ಞಾನಿಯಾಗಿದ್ದರು. ಯಾವುದಾದರೂ ವ್ಯಕ್ತಿಯ ಕಾರಣ ಆ ನಗರ ಗುರ್ತಿಸಲ್ಪಡುತ್ತದೆ ಎಂದರೆ ಅದು ಶಿರಸಿ ಮತ್ತು ವೈದ್ಯ ಗಣಪತಿರಾವ ಪಟವರ್ಧನರಿಂದ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕರಾಗಿದ್ದ ಗೋಳವೆಲ್ಕರ್ ಗುರೂಜಿಯವರ ಚಿಕಿತ್ಸಾ ಸಮಯದಲ್ಲಿ ವೈದ್ಯ ಗಣಪತಿರಾವ ಪಟವರ್ಧನರಿಗೆ ಇವರು ಸಹಾಯಕರಾಗಿದ್ದರು ಎನ್ನುವುದು ಗಮನಾರ್ಹ ಸಂಗತಿ.
ಸಾಮಾನ್ಯವಾಗಿ ಆಯುರ್ವೇದ ಚಿಕಿತ್ಸೆ ಎಂದರೆ ಹಲವು ತಿಂಗಳ ಕಾಲ, ಹಲವು ವಿಧದ ಸಂಕೀರ್ಣ ಔಷಧಿಗಳ ಅವಶ್ಯಕತೆ ಇದೆ ಎಂಬ ಅಭಿಪ್ರಾಯ ಹಲವು ವೈದ್ಯರದ್ದು ಹಾಗೂ ರೋಗಿಗಳದ್ದು, ಆದರೆ ಇಂತಹ ಒಂದು ವಿಚಾರ ಅಭಿಪ್ರಾಯವನ್ನು ಬದಿಗಿಟ್ಟು ಕೆಲವೇ ಕೆಲವು ಔಷಧಗಳಿಂದ ಕೆಲವೇ ಕೆಲವು ದಿನಗಳಲ್ಲಿ ರೋಗಿಯ ರೋಗದ
ಚಿಕಿತ್ಸೆ ಒದಗಿಸಬಹುದು ಎಂಬ ಒಂದು ವಿಚಾರದ ಪ್ರತಿಪಾದಕರಾಗಿ ಅದನ್ನು ಜಗತ್ತಿಗೆ ತೋರಿಸಿಕೊಟ್ಟವರು
ಡಾ ಅರವಿಂದ್ ಪಟವರ್ಧನ. ಅಂದರೆ ಸಾಮಾನ್ಯ ಭಾಷೆಯಲ್ಲಿ ಆಯುರ್ವೇದಿಕ್ ಜನರಲ್ ಪ್ರಾಕ್ಟೀಸ್ ದೈನಂದಿನ ರೋಗಿಗಳ ಅವಶ್ಯಕ ಚಿಕಿತ್ಸೆ ಮೂರು ನಾಲ್ಕು ದಿನದಲ್ಲಿ ಅವನ ರೋಗದಿಂದ ಮುಕ್ತ ಮಾಡಬಹುದು ಅಥವಾ ಕಡಿಮೆ ಮಾಡಬಹುದು ಎನ್ನುವುದನ್ನು ತೋರಿಸಿಕೊಟ್ಟಂತಹ ವೈದ್ಯ.
ಶಾಸ್ತ್ರೋಕ್ತವಾದ ಔಷಧಿಗಳನ್ನ ಅಷ್ಟೇ ಉಪಯೋಗಿಸಿ ಚಿಕಿತ್ಸೆ ನೀಡುತ್ತೇನೆ ಎನ್ನುವುದರ ಬದಲು ಯಾರು ಯಾವ ಉತ್ತಮ ದರ್ಜೆಯ, ಉತ್ತಮ ಪರಿಣಾಮಕಾರಿ ಔಷಧಗಳನ್ನು ತಯಾರಿಸುತ್ತಾರೋ ಅದನ್ನು ಉಪಯೋಗಿಸುವ ರೂಢಿಯನ್ನ ಜಾರಿಗೆ ತಂದರು. ಅತಿ ಅವಶ್ಯಕ ಔಷಧಗಳಿಂದ ರೋಗಿಯ ರೋಗವನ್ನು ಗುಣಪಡಿಸಬಹುದು ಎಂದು ಜಗತ್ತಿಗೆ ತೋರಿಸಿಕೊಟ್ಟಂತಹ ವೈದ್ಯರು ಇವರಾಗಿದ್ದರು ಎನ್ನುವುದು ವಿಶೇಷ.
ಬಂದಂತ ರೋಗಿ ತನಗೆ ಊಟ ಮಾಡಲು ಸಮಯವಿಲ್ಲ ಎಂದು ಹೇಳಿದಾಗ ಯಾವುದೇ ರೀತಿ ಮುಲಾಜಿಲ್ಲದೆ ರೋಗಿಗೆ ಬಯ್ಯುವುದು ಇವರ ರೂಡಿಯಾಗಿತ್ತು, ಅಲ್ಲದೆ ಅವನಿಗೆ ನೀನು ದುಡಿಯುವುದು ನಿನ್ನ ಹೊಟ್ಟೆಗಾಗಿ ಮತ್ತು ನಿನ್ನ ಆಹಾರಕ್ಕಾಗಿ ಅದಕ್ಕೆ ಸಮಯವಿಲ್ಲ ಎಂದರೆ ಹೇಗೆ ಎಂಬ ಪ್ರಶ್ನೆಯನ್ನ ಹಾಕಿ ಸರಿಯಾದ ಸಮಯಕ್ಕೆ ಆಹಾರ ಸ್ವೀಕರಿಸಬೇಕು ಎಂಬ ವಿಚಾರದ ಪ್ರತಿಪಾದನೆಯನ್ನ ಹಾಗೂ ತಿಳುವಳಿಕೆಯನ್ನು ನೀಡಿ ರೋಗಿಗಳಿಗೆ ಕಳುಹಿಸುತ್ತಿದ್ದದ್ದು ಇಂದೂ ಕೂಡ ರೋಗಿಗಳು ನೆನಪಿಸುತ್ತಾರೆ.
ಔಷಧ ತಯಾರಿಕೆಯ ತಯಾರಿಕೆಯನ್ನು ಇವರು ಹೊಸ ರೀತಿಯ ವಿಚಾರವನ್ನು ಜಾರಿಗೆ ತಂದು ಅದೇ ರೀತಿಯಲ್ಲಿ ಔಷಧಯನ್ನು ತಯಾರಿಸುತ್ತಿದ್ದರು. ಯಾವುದೇ ಒಂದು ಸಣ್ಣ ವಿಚಾರ ದಿಂದ ಹೊಸ ಔಷಧ ತಯಾರಿಸಬಹುದು ಎಂದು ಅವರ ಮನಸ್ಸಿನಲ್ಲಿ ಬಂದರೆ ಅದನ್ನು ತಕ್ಷಣದಲ್ಲಿ ಜಾರಿಗೆ ತರುತ್ತಿದ್ದರು.
ಇತ್ತೀಚಿನ ದಿನಗಳಲ್ಲಿ ಸಮಾಜದ ಪ್ರಸಿದ್ಧ ವ್ಯಕ್ತಿಗೆ ಚಿಕಿತ್ಸೆ ನೀಡಿದರೆ ಅವರ ಜೊತೆ ಭಾವಚಿತ್ರವನ್ನು ಪ್ರಚಾರಪಡಿಸುವುದು ವೈದ್ಯ ರ ಒಂದು ರೂಢಿಯಾಗಿದೆ.ಆದರೆ ವಿಶ್ವವಿಖ್ಯಾತರ ಚಿಕಿತ್ಸೆಗೆ ಬಂದರು ಕೂಡ ಅದನ್ನು ಇತರರಿಗೆ ಪ್ರಚಾರ ಪಡಿಸದಂತಹ ವಿಚಾರ ಇವರದಾಗಿತ್ತು. ಸೋಂದಾ ಸ್ವರ್ಣವಲ್ಲಿ ಮಹಾ ಸಂಸ್ಥಾನದ ಶ್ರೀ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮಿಗಳ ಖಾಸಗಿ ವೈದ್ಯರಾಗಿದ್ದರರು ಎನ್ನುವ ಸಂಗತಿಯನ್ನು ಶ್ರೀಗಳವರೇ ಅವರ ಸಂದೇಶದಲ್ಲಿ ವ್ಯಕ್ತಪಡಿಸಿದ್ದಾರೆ.ರಾಷ್ಟೀಯ ಸ್ವಯಂಸೇವಕ ಸಂಘದ ಶ್ರೀ ಹೂ ವೇ ಶೇಷಾದ್ರಿ, ಶ್ರೀ ಬಾಬುರಾವ್ ದೇಸಾಯಿ,ಮಹಾನ್ ಶಾಸ್ತ್ರಿಯ ಸಂಗೀತಗಾರ ಮಲ್ಲಿಕಾರ್ಜುನ ಮನ್ಸೂರ್, ಶ್ರೀ ರಘನಾಥ ನಾಕೋಡ,ಚಿತ್ರನಟಿ ತಾರಾ,
ದಾವಣಗೆ ಚಿಗಟೇರಿ ಆಸ್ಪತ್ರೆಗೆಯ ಚಿಗಟೇರಿ, ನೆಬ್ಬೂರು ನಾರಾಯಣ ಭಾಗವತರು, ಶಿವಾನಂದ ಹೆಗಡೆ ಕೆರೆಮನೆ ಮುಂತಾದವರು.
ಕೆಲ ದಿನಗಳ ಹಿಂದೆ ಅವರ ಮಗನ ( ಖ್ಯಾತ ಆಯುರ್ವೇದ ವೈದ್ಯರು) ಭೇಟಿಗೆ ಬಂದ ಹಲವಾರು ಹೇಳಿದ ಮಾತು ಒಂದೇ ಒಂದು ಹೊತ್ತು ಊಟಕ್ಕೂ ತುಟ್ಟಿ ಇತ್ತು ಆಗ ಔಷಧಿಕೂಟ್ಟವರು ಅಂತ.
ಹಲವು ಆಧ್ಯಾತ್ಮಿಕ ವಿಚಾರ ,ಮಂತ್ರ ಪಠಣ ರೂಢಿಯಲ್ಲಿ ಇಟ್ಟಿದ್ದರು.2 ಘಂಟೆಯ ಅವಧಿಯಲ್ಲಿ ಸಂಪೂರ್ಣ ಭಗವದ್ಗೀತೆ ಪಠಿಸುತ್ತಿದ್ದರು.
ಇವೆಲ್ಲ ಕಾರಣಗಳಿಂದ ಹಲವು ಸನ್ಮಾನಗಳು ಅವರಿಗೆ ಹುಡುಕಿಕೊಂಡು ಬಂದವು
ಸ್ವರ್ಣವಲ್ಲಿ ಮಹಾ ಸಂಸ್ಥಾನದಿಂದ ಸನ್ಮಾನ.
ಕನ್ನಡ ಸಾಹಿತ್ಯ ಪರಿಷತ್ ಶಿರಸಿ ಘಟಕದಿಂದ ಸನ್ಮಾನ.
ರಾಜ್ಯ ಚಿತ್ಪಾವನ ಮಹಾ ಸಮ್ಮೇಳದಲ್ಲಿ ಸನ್ಮಾನ, ಹತ್ತು ಹಲವು ಗೌರವಕ್ಕೆ ಭಾಜನರಾಗಿದ್ದರು.
Article Courtesy: Sirsi’s boys and girls Facebook Page















