ಬೆಂಗಳೂರು ಚಿತ್ತ ಪಾವನ ಸಮಾಜದಿಂದ ಆಯೋಜಿಸಿದ ಎರಡು ದಿನದ ಶತಚಂಡಿಕಾ ಹವನ ಕಾರ್ಯಕ್ರಮ ಬಹಳ ವಿಜೃಂಭಣೆಯಿಂದ ನಡೆಯಿತು
ಇದರ ಕೆಲವು ಭಾವಚಿತ್ರಗಳನ್ನು ಅಪ್ಲೋಡ್ ಮಾಡಿದ್ದೇವೆ. ಸವಿವರವಾದ ಸುದ್ದಿಗೆ ಶಂಕರ HD ಯೌಟ್ಯೂಬ್ ಚಾನೆಲ್ ನ ಲಿಂಕ್ ಅನ್ನು ಹಾಕಲಾಗಿದೆ
Details:
ಶತಚಂಡಿಕಾ ಯಾಗ
* ಚಿತ್ಪಾವನರ ಚಿತ್ತ ಪಾವನವಾಯಿತು.
* ಬೆಂಗಳೂರು ಚಿತ್ಪಾವನ ಸಮಾಜದ ಇತಿಹಾಸ ಪುಸ್ತಕದಲ್ಲಿ ಮತ್ತೊಂದು ಸುವರ್ಣಪುಟ ಸೇರ್ಪಡೆ.
* ಯಶಸ್ಸಿನಲ್ಲಿ ಎಲ್ಲರದ್ದೂ ಸಮಪಾಲು.
* ತನು-ಮನ-ಧನ ಸಹಕಾರ ನೀಡಿದವರೆಲ್ಲರಿಗೂ ಸಂತೃಪ್ತಿಯ ಸಮಯ.
* ಸಮಿತಿ ಸದಸ್ಯರ ಐದು ತಿಂಗಳ ಪರಿಶ್ರಮ ಫಲ ನೀಡಿತು.
* ಸಮಿತಿಯವರೆಲ್ಲರೆಲ್ಲರನ್ನು ಸೇರಿಸಿ, ಚಿತ್ಪಾವನ ಬಂಧುಗಳನ್ನು ಸಂಪರ್ಕಜಾಲಕ್ಕೆ ತಂದು, ಜನಬಲ ಧನಬಲ ಒದಗಿ ಬರಲು ವೇದಿಕೆ ಸಿದ್ಧಪಡಿಸಿದವರು ಶ್ರೀ ಸುನೀಲ್ ಬರ್ವೆಯವರು.
* ಪ್ರತಿ ತಿಂಗಳು ಕಾರ್ಯಕಾರಿ ಸಮಿತಿ ಸಭೆ ನಡೆಸುತ್ತ ಸಮಿತಿ ಸದಸ್ಯರಿಗೆ ಉತ್ಸಾಹ ತುಂಬಿ, ಶತಚಂಡಿಕಾ ಹೋಮದ ಸಿದ್ಧತೆಗಳಿಗಾಗಿ ಹುರಿದುಂಬಿಸಿದವರು ಕಾರ್ಯದರ್ಶಿ ಶ್ರೀ ಗಜಾನನ ಎಂ.ಗೋಖಲೆಯವರು ಮತ್ತು ಕಾರ್ಯಾಧ್ಯಕ್ಷ ಶ್ರೀ ಎಂ.ಗಣಪತಿ ಜೋಶಿಯವರು.
* ಪ್ರಯತ್ನದ ಮೊದಲ ಹಂತದಲ್ಲೇ ಇಂ-ಧನ ತುಂಬಿಸಿ ಧೈರ್ಯ ತುಂಬಿಸಿದವರು ಶ್ರೀ ನಾರಾಯಣ ಹೆಬ್ಬಾರರು.
* ಎರಡನೆ ಹಂತದಲ್ಲಿ ಮತ್ತಷ್ಟು ಇ-ಪವರ್ ಒದಗಿಸಿದವರು ಶ್ರೀ ಅರುಣ್ ಮರಾಠೆಯವರು.
* ಫೋನ್ ಸಂಪರ್ಕ, ವಾಟ್ಸಾಪ್ ಸಂದೇಶಗಳು, ಭಾರ್ಗವಾಣಿಯಲ್ಲಿ ಪ್ರಕಟಣೆ, ಆಹ್ವಾನ ಪತ್ರಿಕೆ ಆಹ್ವಾನ, ಆನ್ಲೈನ್ ದೇಣಿಗೆ ವರ್ಗಾವಣೆ ಮತ್ತು ಆಮಂತ್ರಣಗಳಿಗೆ ಬಂಧುಗಳೆಲ್ಲರೂ ಸಕಾರಾತ್ಮಕವಾಗಿ ಸ್ಪಂದಿಸಿದರು.
* ಶತಚಂಡಿಕಾ ಯಾಗದ ಎರಡು ದಿನಗಳು ಮತ್ತು ಪೂರ್ವಸಿದ್ಧತೆಯ ಹಿಂದಿನ ದಿನ ಗಂಡಸರು ಮತ್ತು ಮಹಿಳೆಯರು ಸ್ವಯಂಸೇವಕರಾಗಿ ಸಹಕರಿಸಿದರು.
* ಎರಡು ದಿನಗಳಲ್ಲೂ ಊರ ಪರವೂರ ಭಕ್ತಾದಿ ಬಂಧುಗಳು ಬಂದು ಭಾಗವಹಿಸಿದರು.
* ಚಿತ್ಪಾವನರಲ್ಲಿ ವೈದಿಕ ಸಂಪ್ರದಾಯ ಪೋಷಿಸಿ ರಕ್ಷಿಸುವ ಹಿರಿಯರ ಜತೆ ಅಧಿಕ ಸಂಖ್ಯೆಯಲ್ಲಿ ಯುವ ಋತ್ವಿಜವರ್ಗದವರು ಒಟ್ಟಾಗಿ
ಭಾಗವಹಿಸಿದ್ದು ವಿಶೇಷ.
* ತೇಜೋಮಯ ಶಾಂತ ಮುಖಮುದ್ರೆ, ಚತುರ್ವೇದ ಜ್ಞಾನ ಸಂಪತ್ತು, ಅನುಭವದಿಂದ ಮಾಗಿದ ಆಚಾರ್ಯತ್ವ ಲಕ್ಷಣಗಳಿಂದ ಮತ್ತು ಶಿಸ್ತು-ಸಂಯಮಗಳಿಂದ ಪ್ರಧಾನ ಆಚಾರ್ಯರಾಗಿ ಭಾಗವಹಿಸಿದ್ದ ಶ್ರೀ ಅನಂತ ಗೋಖಲೆಯವರ
ಉಪಸ್ಥಿತಿ ಶತಚಂಡಿಕಾ ಯಾಗದ ವೈಭವವನ್ನು ಎತ್ತರಕ್ಕೇರಿಸಿತು.
* ಋತ್ವಿಜರೆಲ್ಲರೂ ಸೇರಿ ಮಾಡಿದ ಶೃತಿ ಪಾರಾಯಣ, ಮಂತ್ರಘೋಷಗಳು ಇಡೀ ವಾತಾವರಣವನ್ನು ದೈವಿಕವಾಗಿಸಿದವು.
* ಶನಿವಾರ ಬೆಳಿಗ್ಗೆ ಮತ್ತು ಸಂಜೆ ಊರ ಪರವೂರ ಭಜನಸತಂಡಗಳು ಭಾಗವಹಿಸಿ ಗಾಯನ ಮತ್ತು ಕುಣಿತ ಭಜನೆಯ ಭಕ್ತಿರಸದಲ್ಲಿ ಎಲ್ಲರನ್ನು ಮನರಂಜಿಸಿದರು.
* ಹಿರಿಯರೂ ಜ್ಞಾನವೃದ್ಧರೂ ಶ್ರೀ ವಿಷ್ಣುಭಟ್ ಡೋಂಗ್ರೆ ದಂಪತಿಯನ್ನು ಗೌರವಿಸಿ ಸನ್ಮಾನಿಸಿದ್ದು ಸಂದರ್ಭೋಚಿತವಾಗಿತ್ತು.
* ಸಮಯಕ್ಕೆ ಸರಿಯಾಗಿ ಶುಚಿರುಚಿಯಾದ ಊಟ ತಿಂಡಿ ಪಾನೀಯ ಉಪಚಾರಗಳಲ್ಲಿ ಶ್ರೀ ದತ್ತಾತ್ರೇಯ ಗೋಖಲೆ ತಂಡ ಎಲ್ಲರ ಮೆಚ್ಚುಗೆ ಗಳಿಸಿತು.
* ಶತಚಂಡಿಕಾ ಹೋಮಕ್ಕೆ ಬಂದ ಬಂಧುಗಳೆಲ್ಲರೂ ದೇಣಿಗೆ ನೀಡಿದ್ದು ಮತ್ತು ಕೆಲವರು ಸಮಾಜದ ಕಾರ್ಯವೈಖರಿ ನೋಡಿ ಸದಸ್ಯರಾಗಿ ನೋಂದಾಯಿಸಿಕೊಂಡದ್ದು ಗಮನಾರ್ಹ.
* ಭಾಗವಹಿಸಿದ ಎಲ್ಲ ಬಂದು-ಭಗಿನಿಯರಿಗೆ ಕುಂಕುಮ ಪ್ರಸಾದ, ತೆಂಗಿನಕಾಯಿ, ಲಾಡು ಪ್ರಸಾದ ನೀಡಲಾಯಿತು. ಇದರ ಜತೆ ಶ್ರೀ ಧುಂಡಿರಾಜ್ ಹೆಬ್ಬಾರ್ ಅವರ ‘ಹೆಬ್ಬಾರ್ಝ್’ ಬ್ರಾಂಡ್ ನ ಮಾವಿನಕಾಯಿ ಮೊರಬ್ಬ ಹಂಚಿದ್ದು ಎಲ್ಲರಿಗೂ ಖುಷಿ ಕೊಟ್ಟಿತು.
* ಸರ್ವೆಜನಾ: ಸುಖಿನೋ ಭವಂತು.
ನಮಸ್ಕಾರ
ಸುದ್ಧಿಸುವಿಧಾ

Click the below PLAY button to watch total coverage of the event:















